Slide
Slide
Slide
previous arrow
next arrow

ಚಂದನ ಪ್ರೌಢಶಾಲೆಯ 3 ಶಿಕ್ಷಕರಿಗೆ ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ

300x250 AD

ಶಿರಸಿ: ಡಾ.ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ,ಅಪರ ಆಯುಕ್ತರ ಕಛೇರಿ ಸಾ.ಶಿ ಇಲಾಖೆ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಿರಸಿ ಇವರ ಆಶ್ರಯದಲ್ಲಿ ಡಿ. 6 ಮಂಗಳವಾರದಂದು ಮಂಚಿಕೇರಿ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ನಡೆದ ಡಾ. ಎಚ್ಎಫ್ ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನರವರು ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿಷಯವಾರು ಅಧಿಕ ಶೇಕಡಾವಾರು ಅಂಕ ಪ್ರಮಾಣಕ್ಕೆ ನೀಡುವ ‘ಶಿಕ್ಷಣ ಪರಿಶ್ರಮ ಹಿರಿಮೆ’ ಗೌರವ ಪುರಸ್ಕಾರಕ್ಕೆ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕರಾದ ಸೌಮ್ಯ ಎನ್(ಗಣಿತ ), ದೇವರಾಜ ಬಿ.(ವಿಜ್ಞಾನ), ದಿವ್ಯಾ ಹೆಗಡೆ(ಸಮಾಜ ವಿಜ್ಞಾನ) ಭಾಜನರಾಗಿದ್ದಾರೆ.

6 ವಿಷಯಗಳಲ್ಲಿ 3 ವಿಷಯಗಳಿಗೆ ಚಂದನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದ್ದು, ಪುರಸ್ಕೃತ ಶಿಕ್ಷಕರಿಗೆ ಆಡಳಿತ ಮಂಡಳಿ,ಶಿಕ್ಷಕರು,ಪಾಲಕರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top