• Slide
    Slide
    Slide
    previous arrow
    next arrow
  • ಗಮನ ಸೆಳೆದ ತಿಂಡಿ- ತಿನಿಸುಗಳ ಪ್ರದರ್ಶನ

    300x250 AD

    ಕುಮಟಾ: ಪಟ್ಟಣದ ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಮೆಟ್ರಿಕ್ ಮೇಳದಲ್ಲಿ ಮಕ್ಕಳು ಮಾರಾಟಕ್ಕಿಟ್ಟ ವಿವಿಧ ತಿಂಡಿ-ತಿನಿಸುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
    ಮೇಳವನ್ನು ಎಸ್‌.ಡಿ.ಎಂ.ಸಿ ಉಪಾಧ್ಯಕ್ಷ ನಿತ್ಯಾನಂದ ನಾಯ್ಕ ವನ್ನಳ್ಳಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಅರಿವು ಮೂಡಿಸಲು ಈ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿದೆ. ಮಕ್ಕಳು ಸಿದ್ಧಪಡಿಸಿಕೊಂಡು ಬಂದ ವಿವಿಧ ತಿಂಡಿ-ತಿನಿಸುಗಳನ್ನು ಮೆಟ್ರಿಕ್ ಮೇಳದಲ್ಲಿ ಪ್ರದರ್ಶಿಸುವ ಮೂಲಕ ಮಾರಾಟ ಮಾಡಿದರು. ಮಕ್ಕಳ ವ್ಯವಹಾರಿಕ ಶೈಲಿ ಬಲು ಆಕರ್ಷಣೀಯವಾಗಿದೆ ಎಂದು ಖುಷಿಪಟ್ಟರು.
    ಶಾಲಾ ಮುಖ್ಯಾಧ್ಯಾಪಕಿ ಸುಮನಾ ನಾಯಕ ಮಾತನಾಡಿ, ಮಕ್ಕಳಲ್ಲಿ ಗಣಿತ ವಿಷಯವನ್ನು ಮನದಟ್ಟು ಮಾಡಲು ಈ ಮೆಟ್ರಿಕ್ ಮೇಳ ಸಹಾಯಕಾರಿಯಾಗಿದೆ. ಅಲ್ಲದೇ ಪ್ರತಿನಿತ್ಯ ಪಠ್ಯದ ವಿಷಯದಲ್ಲೇ ತಲ್ಲೀನರಾಗಿರುವ ವಿದ್ಯಾರ್ಥಿಗಳಲ್ಲಿ ಈ ಮೇಳ ಹೊಸ ಆಲೋಚನಾ ಶಕ್ತಿ ಮೂಡಿಸಲು ಸಹಾಯಕಾರಿಯಾಗಿದೆ ಎಂದರು.
    ಸಿ.ಆರ್‌.ಪಿ ಸುಜೀತಾ ಭಟ್ ಮಾತನಾಡಿ, ಮಕ್ಕಳಿಗೆ ಪ್ರಾಯೋಗಿಕವಾಗಿ ವ್ಯವಹಾರದ ಜ್ಞಾನ ಮೂಡಿಸಲು ಈ ಮೆಟ್ರಿಕ್ ಮೇಳ ಸಹಾಯಕಾರಿಯಾಗಿದೆ ಎಂದರು. ಮೆಟ್ರಿಕ್ ಮೇಳದಲ್ಲಿ ಪಾನಿಪುರಿ, ಸ್ವೀಟ್ ಕಾರ್ನ್, ಬೇಲ್ ಪುರಿ, ವಡಾಪಾವ್, ಎಗ್ ಬಿರಿಯಾನಿ, ಸ್ಯಾಂಡ್‌ವಿಚ್, ಫ್ರುಟ್ಸ್ ಸಲಾಡ್, ಕೇಕ್, ಚಕ್ಕಲಿ, ಕೋಡಬಳೆ, ಸಂಕರಪೊಳೆ, ಹೋಳಿಗೆ, ಚಾಕಲೇಟ್, ಜ್ಯೂಸ್ ಸೇರಿದಂತೆ ವಿವಿಧ ತಿಂಡಿ-ತಿನಿಸುಗಳ ಜತೆಗೆ ಶೈಕ್ಷಣಿಕ ಪರಿಕರಗಳು ಗಮನ ಸೆಳೆದವು. ಸುಮಾರು 28 ಮಳಿಗೆಗಳನ್ನು ತೆರೆಯಲಾಗಿತ್ತು. ಮಕ್ಕಳು ಮಾರಾಟಕ್ಕಿಟ್ಟ ತಿಂಡಿ-ತಿನಿಸುಗಳನ್ನು ಪಾಲಕರು ಮತ್ತು ಶಿಕ್ಷಕರು ಖರೀದಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಮೂಡಿಸಿದರು. ಮಕ್ಕಳ ವ್ಯಾವಹಾರಿಕ ಸಂಭಾಷಣೆಯ ದೃಶ್ಯ ಬಲು ಆಕರ್ಷಣೀಯವಾಗಿತ್ತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top