Slide
Slide
Slide
previous arrow
next arrow

ಆಕಸ್ಮಿಕ ಬೆಂಕಿಯಿಂದ ರಸ್ತೆ ಮಧ್ಯೆ‌ ಹೊತ್ತುರಿದ ಲಾರಿ: ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು

300x250 AD

ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63, ಅರ್ತಿಬೈಲ್ ಬಳಿ ಕಬ್ಬಿಣದ ರಾಡ್’ಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿ ಹೊತ್ತು ಉರಿದ ಘಟನೆ ಬುಧವಾರ ರಾತ್ರಿ ಸರಿಸುಮಾರು 3 ಗಂಟೆ ಆಸುಪಾಸಿನಲ್ಲಿ ನಡೆದಿದೆ.

ಮಂಗಳೂರಿಗೆ ಕಬ್ಬಿಣದ ರಾಡುಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಏಕಾಏಕಿ ಹೊತ್ತುರಿಯಲಾರಂಭಿಸಿತ್ತು. ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕದಳ ಸಿಬ್ಬಂದಿಗಳು ಕಗ್ಗತ್ತಲ್ಲಿಯೇ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top