Slide
Slide
Slide
previous arrow
next arrow

ಬಿ‌ಎಸ್ಸಿ ಅಂತಿಮ ವರ್ಷ ಪರೀಕ್ಷೆ ಫಲಿತಾಂಶ: ಎಂಎಂ ಮಹಾವಿದ್ಯಾಲಯಕ್ಕೆ ಸ್ನೇಹಾ ಹೆಗಡೆ ಪ್ರಥಮ

300x250 AD

ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಬಿ‌ಎಸ್ಸಿ ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶ ಬಂದಿದ್ದು, ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ 83.41% ವಿದ್ಯಾರ್ಥಿಗಳು ಉತ್ತೀರ್ಣರಾಗಿ ಉತ್ತಮ ಫಲಿತಾಂಶ ನೀಡಿದ್ದಾರೆ. ಮೂರು ವರ್ಷದ ಫಲಿತಾಂಶದಿಂದ ಸ್ನೇಹಾ ಹೆಗಡೆ 89.72% ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ, ಮಹಮ್ಮದ್ ಅಸ್ಸಾದಿ 87.25% ದ್ವಿತೀಯ ಹಾಗೂ ಸೌಜನ್ಯ ಆಟಗಾರ 85.61% ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.
193 ವಿದ್ಯಾರ್ಥಿಗಳಲ್ಲಿ 161ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 98 ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆದಿದ್ದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಂಇಎಸ್ ನ ಅಧ್ಯಕ್ಷರಾದ ಜಿ.ಎಂ.ಹೆಗಡೆ ಮುಳಖಂಡ ,ಉಪಸಮಿತಿ ಅಧ್ಯಕ್ಷ ಎಸ್.ಕೆ. ಹೆಗಡೆ ಭಾಗವತ್, ಪ್ರಾಚಾರ್ಯ ಡಾ. ಟಿ.ಎಸ್.ಹಳೆಮನೆ, ಸದಸ್ಯರು, ಪದಾಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top