Slide
Slide
Slide
previous arrow
next arrow

ತಟ್ಟಿಸರ ಸೊಸೈಟಿಯಲ್ಲಿ ಸಹಕಾರಿ ಸಪ್ತಾಹ: ಪ್ರಗತಿ ಪರ ರೈತ ಸುಬ್ರಹ್ಮಣ್ಯ ಹೆಗಡೆಗೆ ಸನ್ಮಾನ

300x250 AD

ಶಿರಸಿ: ತಾಲೂಕಿನ ತಟ್ಟಿಸರ ಸಮೀಪದ ಓಣಿಕೆರೆ ಯುವ ಪ್ರಗತಿ ಪರ ರೈತ ಸುಬ್ರಹ್ಮಣ್ಯ ಹೆಗಡೆ ಗುಳೇಬೈಲ ಅವರನ್ನು ತಟ್ಟಿಸರ ಮೇಲಿನ ಓಣಿಕೇರಿ ಸೊಸೈಟಿಯಲ್ಲಿ ಆತ್ಮೀಯವಾಗಿ ಗೌರವಿಸಿ ಅಭಿನಂದಿಲಾಯಿತು.

ಕಳೆದ ಒಂದು ದಶಕಗಳಿಂದ ಜೇನು ಕೃಷಿ, ಅಡಿಕೆ, ಕಬ್ಬು, ಬಾಳೆ ಸಹಿತ ಇತರ ಬಹುವಿಧ ಬೇಸಾಯದಲ್ಲಿ ತೊಡಗಿಕೊಂಡ ಕಾರಣಕ್ಕೆ ಸಹಕಾರಿ ಸಪ್ತಾಹದ ಅಂಗವಾಗಿ ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರಕ್ಕೆ ಯುವಕರನ್ನು ಪ್ರೋತ್ಸಾಹಿಸುವ ಕಾರಣದಿಂದ ಸೊಸೈಟಿ ಅಭಿನಂದಿಸಿತು.

300x250 AD

ಈ ವೇಳೆ ಸೊಸೈಟಿ ಅಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಿ.ಟಿ.ಹೆಗಡೆ ತಟ್ಟಿಸರ, ಉಪಾಧ್ಯಕ್ಷ ಎಂ.ಎನ್.ಹೆಗಡೆ ಸಂಪೆಕಟ್ಟು, ಸಹಕಾರಿ ರತ್ನ ಆರ್.ಎನ್.ಹೆಗಡೆ ಗೊರ್ಸಗದ್ದೆ, ಅಳ್ಳಂಕಿ ಹಾಗೂ ಇತರ ನಿರ್ದೇಶಕರು ಇದ್ದರು.

Share This
300x250 AD
300x250 AD
300x250 AD
Back to top