Slide
Slide
Slide
previous arrow
next arrow

ಕಿರವತ್ತಿಯಲ್ಲಿ 400ಕ್ಕೂ ಹೆಚ್ಚು ಜನರ ಉಚಿತ ಆರೋಗ್ಯ ತಪಾಸಣೆ

300x250 AD

ಯಲ್ಲಾಪುರ: ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆ, ಶಿರಸಿಯ ಕದಂಬ ಫೌಂಡೇಶನ್ ಮತ್ತು ಕಿರವತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಸ್ಪತ್ರೆಯ ತಜ್ಞ ವೈದರುಗಳಿಂದ ಹಮ್ಮಿಕೊಳ್ಳಲಾಗಿತ್ತು.
ಕಿರವತ್ತಿ ಪಂಚಾಯತ್ ಮತ್ತು ಮದನೂರ ಪಂಚಾಯತಿಯ ನಾಲ್ಕು ನೂರಕ್ಕೂ ಅಧಿಕ ಜನರನ್ನು ವೈದ್ಯರು ತಪಾಸಣೆ ಮಾಡಿದರು. ರಕ್ತದ ಒತ್ತಡ ಮಧುಮೇಹ ಪರೀಕ್ಷೆ ಹಾಗೂ ಇಸಿಜಿ ಪರೀಕ್ಷೆಗಳನ್ನು ಮಾಡಿ ಔಷಧವನ್ನು ಉಚಿತವಾಗಿ ನೀಡಲಾಯಿತು, ನೂರಾರು ಮಕ್ಕಳು ಸಹ ಶಿಬಿರದ ಲಾಭ ಪಡೆದರು. ಆರೋಗ್ಯ ಶಿಬಿರವನ್ನು ಪಂಚಾಯತರಾಜ್ ವಿಕೇಂದ್ರೀಕರಣ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ, ವನವಾಸಿ ಕಲ್ಯಾಣ ಹಿತರಕ್ಷಣಾ ಪ್ರಮುಖ ದೊಂಡು ಪಾಟೀಲ್, ಸುನೀಲ ಕಾಂಬಳೆ, ಪ್ರಮುಖರಾದ ವಿಠ್ಠಲ ಪಾಂಡ್ರಮೀಸೆ, ಬಾಪು ತಾಟೆ, ಸಂಭಾಜಿ ಕಾಂಬಳೆ, ಸಾಮಾಜಿಕ ಕಾರ್ಯಕರ್ತ ಮಹೇಶ ಪೂಜಾರ, ರಾಮಕೃಷ್ಣ ಭಟ್, ಪ್ರಭು ಚಿಚಕಂಡಿ, ಅರ್ಜುನ ಬೆಂಗೇರಿ, ಬಜ್ಜು ಪಿಂಗಳೆ, ಸುಭಾಸ ಶೇಷಗೇರಿ, ಲಕ್ಷ್ಮಣ ತೋರತ್, ಸೋನು ಜಂಗ್ಲೆ, ಬಾಬು ಶೆಂಡಗೆ ಹಾಗೂ ಆಸ್ಪತ್ರೆಯ ಅಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top