Slide
Slide
Slide
previous arrow
next arrow

ಜನಜಾತಿ ಗೌರವ ದಿವಸ ಕಾರ್ಯಕ್ರಮಕ್ಕೆ ಭಟ್ಕಳದ ಡಕ್ಕೆ ಕುಣಿತ ತಂಡ

300x250 AD

ಭಟ್ಕಳ: ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರು ಆಯೋಜಿಸಿದ್ದ ಜನಜಾತಿ ಗೌರವ ದಿವಸ ಕಾರ್ಯಕ್ರಮ ನ.15ರಂದು ಮೈಸೂರಿನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಡುವಳ್ಳಿಯ ಹಲ್ಯಾಣಿ ಹಿರೆಬೇಳು ಗ್ರಾಮದ ನಾಗರಾಜ ಗೊಂಡರ ನೇತ್ರತ್ವದ ದುರ್ಗಾ ಡಕ್ಕೆ ಕುಣಿತ ತಂಡಕ್ಕೆ ಅವಕಾಶ ನೀಡಲಾಗಿದೆ.
ಈ ಕುರಿತು ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಯ ವತಿಯಿಂದ ದುರ್ಗಾ ಡಕ್ಕೆ ಕುಣಿತ ತಂಡಕ್ಕೆ ಆಹ್ವಾನ ನೀಡಲಾಗಿದ್ದು, ನ.15ರಂದು ಈ ತಂಡ ಮೈಸೂರಿಗೆ ಪ್ರಯಾಣ ಬೆಳೆಸಲಿದೆ. ಕಳೆದ ಹಲವಾರು ವರ್ಷಗಳಿಂದ ದುರ್ಗಾ ಡಕ್ಕೆ ಕುಣಿತ ತಂಡ ರಾಜ್ಯದ ವಿವಿಧೆಡೆ ಹಾಗೂ ಪ್ರತಿಷ್ಠಿತ ದೆಹಲಿಯ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಿ ಜನಮೆಚ್ಚುಗೆ ಗಳಿಸಿದ್ದು, ಇವರ ತಂಡಕ್ಕೆ ತಾಲೂಕಿನ ವಿವಿಧ ಸಂಘ- ಸಂಸ್ಥೆಗಳು ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಕಲಾ ತಂಡದ ಸಂಪರ್ಕ ಸಂಖ್ಯೆ: 9480442512

300x250 AD
Share This
300x250 AD
300x250 AD
300x250 AD
Back to top