• Slide
    Slide
    Slide
    previous arrow
    next arrow
  • ಬೆಣ್ಣೆ ಕುಟುಂಬಕ್ಕೆ ಹರಸಿದ ವಿದ್ಯಾಧೀಶ ತೀರ್ಥರು

    300x250 AD

    ಕುಮಟಾ: ಪಟ್ಟಣದ ಪ್ರತಿಷ್ಠಿತ ಹನುಮಂತ ಬೆಣ್ಣೆ ಸಮೂಹ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಬೆಣ್ಣೆ ಕುಟುಂಬಕ್ಕೆ ಹರಸಿದರು.
    ಜಿಲ್ಲೆ ಸೇರಿದಂತೆ ಪಟ್ಟಣದಲ್ಲಿ ವಿವಿಧ ಪ್ರಸಿದ್ಧ ಕಂಪನಿಗಳ ಉತ್ಪನ್ನಗಳ ಅಧಿಕೃತ ವಿತರಕರಾದ ಪ್ರತಿಷ್ಠಿತ ಹನುಮಂತ ಬೆಣ್ಣೆ ಸಮೂಹ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಸಂಸ್ಥೆಯ ವ್ಯವಹಾರದ ಬಗ್ಗೆ ಮಾಹಿತಿ ಪಡೆದು ಖುಷಿಪಟ್ಟರು. ಶ್ರೀಗಳ ಪಾದ ಪೂಜೆ ಸೇರಿದಂತೆ ವಿವಿಧ ದೈವಿ ಕೈಂಕರ್ಯಗಳನ್ನು ಬೆಣ್ಣೆ ಕುಟುಂಬ ನೆರವೇರಿಸುವ ಮೂಲಕ ಶ್ರೀಗಳ ಕೃಪಾಶೀರ್ವಾದಕ್ಕೆ ಪಾತ್ರರಾದರು. ಅಲ್ಲದೇ ಬೆಣ್ಣೆ ಕುಟುಂಬದ ವ್ಯವಹಾರಿಕ ಉದ್ಯಮ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹಾರೈಸಿದ ಶ್ರೀಗಳನ್ನು ಬೆಣ್ಣೆ ಕುಟುಂಬ ಭಕ್ತಿಯಿಂದ ಗೌರವಿಸುವ ಮೂಲಕ ಶ್ರೀಗಳ ಶುಭ ಹಾರೈಕೆ ಪಡೆಯಿತು.
    ಶ್ರೀಗಳ ಜೊತೆಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಜಿಎಸ್‌ಬಿ ಸಮಾಜಬಾಂಧವರಿಗೆ ಉಪಾಹಾರದ ವ್ಯವಸ್ಥೆಯನ್ನು ಮಾಡುವ ಮೂಲಕ ಬೆಣ್ಣೆ ಕುಟುಂಬ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
    ಈ ಸಂದರ್ಭದಲ್ಲಿ ವಿ.ಎಚ್.ಬೆಣ್ಣೆ, ನಾಗೇಶ ಬೆಣ್ಣೆ, ವಿನಾಯಕ ಬೆಣ್ಣೆ, ಬೆಣ್ಣೆ ಕುಟುಂಬದ ಸದಸ್ಯರು ಮತ್ತು ಜಿಎಸ್‌ಬಿ ಮುಖಂಡರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top