• Slide
    Slide
    Slide
    previous arrow
    next arrow
  • ಸೋಲಿಸುವುದಕ್ಕಾಗಿ ರಾಜಕೀಯ ಮಾಡಲ್ಲ: ಹೆಬ್ಬಾರ್

    300x250 AD

    ಶಿರಸಿ: ನಾನು ಯಾರನ್ನು ಸೋಲಿಸುವುದಕ್ಕಾಗಿ ರಾಜಕೀಯ ಮಾಡಲ್ಲ. ಜನರ ಸೇವೆಯೆ ನನ್ನ ಮೊದಲ ಆದ್ಯತೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
    ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಾಗೋಡ ಗ್ರಾಮದ ಅಂಬಾಳಿಕೆ ಹಳ್ಳಕ್ಕೆ 1 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಂದಾರ ಸಮೇತ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ನಂತರ ಮಾತನಾಡಿದ ಅವರು, ಸೋಲಿಸುವುದೇ ನನ್ನ ಮುಖ್ಯ ಗುರಿ ಎಂದಿರುವ ವಿ.ಎಸ್.ಪಾಟೀಲರಿಗೆ ದೇವರು ಒಳ್ಳೆಯದನ್ನ ಮಾಡಲಿ. ಯಾರು ಯಾರನ್ನ ಸೋಲಿಸತ್ತಾರೆಂದು ನಾವು ಹೇಳುವುದು ಬೇಡ, ಅದನ್ನ ಮತದಾರ ಪ್ರಭು ನಿರ್ಧರಿಸುತ್ತಾನೆ ಎಂದರು.
    ಈ ಸಂದರ್ಭದಲ್ಲಿ ಉಂಚಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ದೇವೇಂದ್ರ ನಾಯ್ಕ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ ಹಾಗೂ ಗ್ರಾಮ ಪಂಚಾಯತ ಸದಸ್ಯರು, ಶಕ್ತಿ ಕೇಂದ್ರದ ಅಧ್ಯಕ್ಷರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top