Slide
Slide
Slide
previous arrow
next arrow

ನಾಲ್ವಡಿ ಕೃಷ್ಣರಾಜ ಒಡೆಯರ್ ಘಟಿಕೋತ್ಸವ : ಪ್ರಮಾಣ ಪತ್ರ ವಿತರಿಸಿದ ಸಿ. ಅಶ್ವಥ್ ನಾರಾಯಣ್

300x250 AD

ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಘಟಿಕೋತ್ಸವ ಡಿಪ್ಲೋಮಾ 2022 ನವಂಬರ್ 2 ರಂದು ಬ್ಯಾಂಕ್ವೆಟ್ ಹಾಲ್ ವಿಧಾನಸೌಧ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ಸಮಾರಂಭದಲ್ಲಿ 45 ವಿವಿಧ ಕೋರ್ಸ್ ನಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವರಾದ ಸಿ. ಅಶ್ವಥ್ ನಾರಾಯಣ್ ರವರು ಡಿಪ್ಲೋಮಾ ಪದವಿ ಪ್ರಮಾಣ ಪತ್ರ ಹಾಗೂ ಚಿನ್ನ, ಬೆಳ್ಳಿ ,ಕಂಚಿನ ಪದಕ ನೀಡಿ ಗೌರವಿಸಿದರು.
ಈ ಸಮಾರಂಭದಲ್ಲಿ ಮುರುಡೇಶ್ವರ ಆರ್. ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನ ಸಿರಾಮಿಕ್ ಟೆಕ್ನಾಲಜಿ ವಿಭಾಗಕ್ಕೆ ಮೂರು ರಾಂಕುಗಳು ದೊರೆತಿದ್ದು ,ಚಿನ್ನದ ಪದಕದೊಂದಿಗೆ ಪ್ರಥಮ ರಾಂಕ್ ಪಡೆದ ರೂಜಾರಿಯೋ ಡಿಸೋಜ, ಬೆಳ್ಳಿಯ ಪದಕದೊಂದಿಗೆ ಎರಡನೇ ರಾಂಕ್ ಪಡೆದ ಸಿದ್ದಲಿಂಗ, ಹಾಗೂ ಕಂಚಿನ ಪದಕದೊಂದಿಗೆ ಮೂರನೇ ರ್ಯಾಂಕ್ ಪಡೆದ ಚರಣ್ ರಾಜ್ ಎಸ್,
ಈ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಜೆ .ಎಸ್. ಡಬ್ಲ್ಯೂ ಸ್ಟೀಲ್ ಕಂಪನಿಯಲ್ಲಿ, ಮತ್ತೊಬ್ಬರು ಹೈದರಾಬಾದ್ ಗ್ಲಾಸ್ ಕಂಪನಿಯಲ್ಲಿ ಕೆಲಸ ದೊರೆತಿರುತ್ತದೆ ಎಂದು ಉದ್ಯೋಗಾಧಿಕಾರಿಗಳು/ ಸಿರಾಮಿಕ್ ವಿಭಾಗದ ಮುಖ್ಯಸ್ಥರು ಹಾಗೂ ಉಪ ಪ್ರಾಚಾರ್ಯರು ಆದ ಕೆ. ಮರಿಸ್ವಾಮಿಯವರು ಮಾಹಿತಿ ನೀಡಿದ್ದಾರೆ. ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಚಾರ್ಯರಾದ ಸಂತೋಷ್ ಆರ್. ಎ. ಆಡಳಿತಾ ಧಿಕಾರಿಗಳಾದ ದಿನೇಶ್ ಗಾವ್ಕರ್ ,ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಹರ್ಷವನ್ನ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top