Slide
Slide
Slide
previous arrow
next arrow

ನ.4ಕ್ಕೆ ಏಕಾದಶಿ ಯಕ್ಷಗಾನ ಸರಣಿ ಸಮಾರೋಪ

300x250 AD

ಶಿರಸಿ: ಕಂಚಿಕೈ ಶ್ರೀ ಕರ್ಕಿಹಕ್ಕಲ ಮಹಾಗಣಪತಿ ಯಕ್ಷಗಾನ ಮಂಡಳಿಯ ಶುಭಕೃತ ಸಂವತ್ಸರದ ಏಕಾದಶಿ ಯಕ್ಷಗಾನ ತಾಳಮದ್ದಳೆ ಸರಣಿಯ ಸಮಾರೋಪ ಕಾರ್ಯಕ್ರಮ ನ, 4 ರ ರಾತ್ರಿ 9:ಕ್ಕೆ ನಡೆಯಲಿದೆ.

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರನ್ನು ಸನ್ಮಾನಿಸಲಾಗುತ್ತದೆ. ರಾಜ್ಯ ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಜಿ.ಎಂ. ಭಟ್ಟ ಕೆವಿ ಅಧ್ಯಕ್ಷತೆ ವಹಿಸುವವರು. ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಹೆಗಡೆ ಅತಿಥಿಯಾಗಿ ಪಾಲ್ಗೊಳ್ಳುವರು. ನಂತರ ಶ್ರೀರಾಮ ನಿರ್ಯಾಣ ಆಖ್ಯಾನದ ತಾಳಮದ್ದಳೆ ರಾಮಚಂದ್ರ ಹೆಗಡೆ ಮತ್ತು ಸತೀಶ ಹೆಗಡೆ ಪ್ರಾಯೋಜಕತ್ವದಲ್ಲಿ ಏರ್ಪಡಿಸಲಾಗಿದೆ. ಅರ್ಥಧಾರಿಗಳಾಗಿ ಗೋಡೆ ನಾರಾಯಣ ಹೆಗಡೆ, ಜಿ. ಎಂ. ಭಟ್ಟ, ಆರ್.ಟಿ ಭಟ್ಟ ಕಬಗಾಲ್ ಹಾಗೂ ಸ್ಥಳೀಯ ಕಲಾವಿದರು ಮತ್ತು ಹಿಮ್ಮೇಳದಲ್ಲಿ ಎಂ.ಪಿ ಹೆಗಡೆ ಮತ್ತಿತರರು ಪಾಲ್ಗೊಳ್ಳುವರು.

300x250 AD

Share This
300x250 AD
300x250 AD
300x250 AD
Back to top