Slide
Slide
Slide
previous arrow
next arrow

ಪಾಲಿಟೆಕ್ನಿಕ್ ಕಾಲೇಜು ನೌಕರ ಹೃದಯಾಘಾತದಿಂದ ನಿಧನ

300x250 AD

ಕಾರವಾರ: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನೌಕರ ರವಿ ಕೆ.ಸಿ.(56) ತೀವ್ರ ಹೃದಯಾಘಾತದಿಂದ ಇತ್ತೀಚಿಗೆ ಇಲ್ಲಿನ ಕ್ರಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಊಟ ಮಾಡುವಾಗ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರೇ ಕಾರ್ ಡ್ರೈವ್ ಮಾಡಿಕೊಂಡು ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬಂದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾದರು. ವೈದ್ಯರು ಅವರಿಗೆ ಹೃದಯ ಸಂಬಂಧಿ ಚಿಕಿತ್ಸೆಗಳನ್ನು ನೀಡಿದರಾದರೂ ಅವು ಫಲಕಾರಿಯಾಗಲಿಲ್ಲ. ಕಾರ್ಡಿಕ್ ಆಟ್ಯಾಕ್ ಎಂದು ವೈದ್ಯರು ನುಡಿದರು. ಕಳೆದ 30 ವರ್ಷಗಳಿಂದ ಅವರು ಇಲ್ಲಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಾಹನ ಚಾಲಕ , ಆಟೋಮೊಬೈಲ್ ವಿಭಾಗದ ಇನ್ಸಟ್ರಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ರವಿ ಮೂಲತಃ ಬೆಂಗಳೂರಿನ ಕೆಂಗೇರಿ ನಿವಾಸಿ. ಅವರು ಕಾರವಾರದಲ್ಲಿ ನೆಲೆಸಿದ್ದರು.ಸ್ನೇಹಮಯಿ ವ್ಯಕ್ತಿತ್ವದ ಅವರು ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕ ಸಿಬ್ಬಂದಿ , ಬೋಧಕೇತರ ಸಿಬ್ಬಂದಿ ಹಾಗೂ ಸ್ನೇಹಿತರು ರವಿ ಕೆ.ಸಿ.ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top