Slide
Slide
Slide
previous arrow
next arrow

ಯಶಸ್ವಿ ಯಾಗಿ ನಡೆದ ಕೋಟಿ ಕಂಠ ಗಾಯನ

300x250 AD

ದಾಂಡೇಲಿ: ನಗರದ ವನಶ್ರೀನಗರದಲ್ಲಿರುವ ಪರಿಜ್ಞಾನಾಶ್ರಮ ಶಾಲೆಯ ಮೈದಾನದಲ್ಲಿ ಸ್ಥಳೀಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸುವಿಕೆಯ ಮೂಲಕ ಕೋಟಿ ಕಂಠ ಕಾರ್ಯಕ್ರಮ ಯಶಸ್ವಿಯಾಯಿತು.
ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು. ಪರಿಜ್ಞಾನಾಶ್ರಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧಾಕರ ರೆಡ್ಡಿ, ಸಂಸ್ಥೆಯ ಪದಾಧಿಕಾರಿಗಳಾದ ವಾಸುದೇವ ಪ್ರಭು, ಮಂಜುನಾಥ ಪಾಟೀಲ, ಎಸ್.ಎಂ.ಪಾಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೋಟಿ ಕಂಠ ಕಾರ್ಯಕ್ರಮದಲ್ಲಿ ಪರಿಜ್ಞಾನಾಶ್ರಮ ಶಾಲೆ, ಗಾಂಧಿನಗರದ ತೋಹಿದ್ ಉರ್ದು ಶಾಲೆ, ಹಿರೇಮಠ ಐಟಿಐ ಕಾಲೇಜು, ಸ.ಕ.ಹಿ.ಪ್ರಾ ಶಾಲೆ ಗಾಂಧಿನಗರ, ಸ.ಕಿ.ಪ್ರಾ.ಶಾಲೆ ಮಾರುತಿ ನಗರ, ಸರಕಾರಿ ಉರ್ದು ಶಾಲೆ ಆಜಾದ್ ನಗರ ಮೊದಲಾದ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಪರಿಜ್ಞಾನಾಶ್ರಮ ಶಾಲೆಯ ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ಶ್ರಮಿಸಿದ್ದರು.

300x250 AD
Share This
300x250 AD
300x250 AD
300x250 AD
Back to top