Slide
Slide
Slide
previous arrow
next arrow

ಅಂಗನವಾಡಿ ಸಹಾಯಕಿ ನೇಮಕಾತಿಯ ಕುರಿತು ತನಿಖೆಗೆ ಆಗ್ರಹ

300x250 AD

ದಾಂಡೇಲಿ: ಸುಭಾಸನಗರದ ಅಂಗನವಾಡಿ ಕೇಂದ್ರ ಸಂಖ್ಯೆ: 03ರಲ್ಲಿ ಸಹಾಯಕಿ ಹುದ್ದೆ ನೇಮಕಾತಿಯ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ನಿವಾಸಿಗಳು ತಹಶೀಲ್ದಾರ್ ಕಚೇರಿಯಲ್ಲಿ ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಲಿಖಿತ ಮನವಿ ಸಲ್ಲಿಸಿದ್ದಾರೆ.

ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಹುದ್ದೆ ನೇಮಕದಲ್ಲಿ ಸ್ಥಳೀಯರಿಗೆ ವಂಚಿಸಿ, ಅನ್ಯ ವಾರ್ಡಿನ ಅಭ್ಯರ್ಥಿಯನ್ನು ನೇಮಕಗೊಳಿಸಲಾಗಿದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸ್ಥಳೀಯವಾಗಿರುವ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ವಿನಂತಿಸಲಾಗಿದೆ.

300x250 AD

ಈ ಸಂದರ್ಭದಲ್ಲಿ ಅಬ್ದುಲ್ ಸೋನಾರ್, ಆಜಂ, ಮುಜಾಫರ್ ತಹಶೀಲ್ದಾರ್, ಅಬ್ದುಲ್ ಮೋಹಿನ್, ಪ್ರಶಾಂತ ಕದಂ, ರೋಶನ್ ಹಟೇಲಿ, ಕಮಲ್ ಶಿರಹಟ್ಟಿ, ಫಾತಿಮಾ, ಸುಜಾತಾ, ಶೈನಾಜ್, ಅರ್ಷಿಯಾ ಮೊದಲಾದವರು ಇದ್ದರು.

Share This
300x250 AD
300x250 AD
300x250 AD
Back to top