• Slide
    Slide
    Slide
    previous arrow
    next arrow
  • ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ವಕೀಲರ ಸಂಘಕ್ಕೆ ಮನವಿ

    300x250 AD

    ದಾಂಡೇಲಿ: ದಲಿತ ಕುಟುಂಬಕ್ಕೆ ಸೇರಿದ ಸತೀಶ್ ಚೌವ್ಹಾಣ್ ಅವರು ಮಹಿಳಾ ನ್ಯಾಯವಾದಿ ಕವಿತಾ ಗಡೆಪ್ಪನವರ ಮೇಲೆ ಎಸ್.ಸಿ/ಎಸ್ಟಿ ಕಾಯ್ದೆಯಡಿ ದೂರು ದಾಖಲಿಸಿದ್ದು, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯಿಂದ ನಗರದ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಭಾಭವನದಲ್ಲಿ ಮನವಿ ನೀಡಲಾಯಿತು.

    ಮನವಿಯಲ್ಲಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವುರ ಜೊತೆಗೆ ನ್ಯಾಯವಾದಿ ಕವಿತಾ ಗಡೆಪ್ಪನವರ ಮೇಲೆ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಮನವಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ನಡಿಗೇರ ಅವರ ನೇತೃತ್ವದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ವಿ.ಆರ್.ಹೆಗಡೆಯವರಿಗೆ ನೀಡಲಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top