Slide
Slide
Slide
previous arrow
next arrow

ರೈಲ್ವೆಯಿಂದ ಆಯತಪ್ಪಿ ಬಿದ್ದು ಯುವಕ ಮೃತ

300x250 AD

ಯಲ್ಲಾಪುರ: ಪಟ್ಟಣದ ಸಬಗೇರಿಯ ಯುವಕನೊಬ್ಬ ರೈಲ್ವೆಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಪಟ್ಟಣದ ಸಬಗೇರಿ ಜಡ್ಡಿ ನಿವಾಸಿ 24 ವರ್ಷದ ಯುವಕ ಗಿರೀಶ್ ದೇವಪ್ಪ ಯಾಮಕೆ ಮೃತಪಟ್ಟ ಯುವಕನಾಗಿದ್ದು ಈತ ಹೊಸಪೇಟೆ ತೋರಣಗಲ್ ಕಂಪನಿಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಯಲ್ಲಾಪುರದಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿ, ನಂತರ ಐಟಿಐ ಮುಗಿಸಿ ಜಿಂದಾಲ್ ಕಂಪೆನಿಗೆ ಕೆಲಸಕ್ಕೆ ಸೇರಿದ್ದ.ಹೊಸಪೇಟೆಯಿಂದ ಯಲ್ಲಾಪುರದ ಮನೆಗೆ ರೈಲ್ವೆಯಲ್ಲಿ ಬರುತ್ತಿದ್ದ ವೇಳೆ ರೈಲ್ವೆಯ ಬೋಗಿಯ ಬಾಗಿಲಲ್ಲಿ ಆಯತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

300x250 AD
Share This
300x250 AD
300x250 AD
300x250 AD
Back to top