• Slide
    Slide
    Slide
    previous arrow
    next arrow
  • 3 ಗಂಟೆಗಳ ಅವಧಿಯಲ್ಲೇ ಕಳ್ಳತನ: ಚಿನ್ನಾಭರಣ ದೋಚಿ ಪರಾರಿ

    300x250 AD

    ಭಟ್ಕಳ: ಔತಣಕೂಟಕ್ಕೆ ತೆರಳಿದ್ದ ಸಂದರ್ಭ ಪಟ್ಟಣದ ರಹಮತಾಬಾದಿನ ಅಬ್ದುಲ್ ಅಜೀಜ್ ಎನ್ನುವವರ ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣಗಳನ್ನ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

    ಗುರುವಾರ ರಾತ್ರಿ ಸಂಬಂಧಿಕರ ಮನೆಗೆ ಔತಣಕೂಟಕ್ಕೆ ತೆರಳಿ ವಾಪಸ್ಸಾಗುವ ನಡುವಿನ ಸುಮಾರು 3 ಗಂಟೆಗಳ ಅವಧಿಯಲ್ಲೇ ಈ ಕಳ್ಳತನ ನಡೆದಿದೆ. ಮನೆಯ ಹಿಂಬಾಗಿಲು ಮತ್ತು ಫೈಬರ್ ಬಾಗಿಲನ್ನು ಕಬ್ಬಿಣದ ವಸ್ತುಗಳಿಂದ ಮುರಿದು ಒಳ ನುಗ್ಗಿರುವ ಕಳ್ಳರು, ಕಬೋರ್ಡಿನಲ್ಲಿ ಇಟ್ಟಿದ್ದ ಬ್ಯಾಗಿನಿಂದ ಆಭರಣಗಳನ್ನು ಕದ್ದೊಯ್ದಿದ್ದಾರೆ.

    300x250 AD

    ಈ ಬಗ್ಗೆ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದ, ಸಿಪಿಐ ಮಹಾಬಲೇಶ್ವರ ನಾಯ್ಕ್, ಪಿಎಸ್‌ಐ ಭರತ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶುಕ್ರವಾರ ಕಾರವಾರದಿಂದ ಶ್ವಾನದಳದೊಂದಿಗೆ ಆಗಮಿಸಿದ ಬೆರಳಚ್ಚು ತಜ್ಞರು, ಪರಿಶೀಲನೆ ನಡೆಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top