Slide
Slide
Slide
previous arrow
next arrow

ಕಬ್ಬಿಣದ ವಸ್ತು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

300x250 AD

ಮುಂಡಗೋಡ: ಪಟ್ಟಣದ ನವರಂಗ್ ವೆಲ್ಡಿಂಗ್ ವರ್ಕ್ಸ್ ಅಂಗಡಿಯಿಂದ 1.30 ಲಕ್ಷ ರೂ. ಬೆಲೆ ಬಾಳುವ ಕಬ್ಬಿಣದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಈರ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೆ.17ರಂದು ಅಂಗಡಿಯಲ್ಲಿ ಕಳುವಾಗಿದ್ದು, ಅಂಗಡಿ ಮಾಲೀಕ ಎಜಾಜ ನವಾಜ ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಭೇದಿಸಿದ ಪೊಲೀಸರು, ಕಳುವಾದ ವಸ್ತುಗಳು, ಕಳ್ಳಮಾಲು ಒಯ್ಯಲು ಬಳಸಿದ ಟ್ರಕ್ ಸಮೇತ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಲಂದರ ನಗರ ಕ್ರಾಸ್ ನಿವಾಸಿ ಮಹ್ಮದ್ ಮನ್ಸೂರ್, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಾವರಗೇರೆ ಕಾಲೇಜು ರಸ್ತೆಯ ನಿವಾಸಿ ಮಹ್ಮದ್ ಸಲ್ಮಾನ್‌ನನ್ನು ಬಂಧಿಸಲಾಗಿದೆ.

300x250 AD

ಈ ಕಾರ್ಯಾಚರಣೆಯಲ್ಲಿ ಪಿಐ ಸಿದ್ದಪ್ಪ ಸಿಮಾನಿ, ಪಿಎಸೈ ಬಸವರಾಜ ಮಬನೂರ, ಪ್ರೊಬೆಷನರಿ ಪಿಎಸೈ ಮಹೇಶ ಮಾಳೆ, ಎಎಸ್‌ಐ ಮಣಿಮಾಲನ್ ಮೇಸ್ತಿç, ಸಿಬ್ಬಂದಿ ಮಹ್ಮದ ಸಲೀಂ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಡುಡಿಗೇರ, ಬಸವರಾಜ್ ಲಮಾಣಿ, ಮಹದೇವಪ್ಪ, ಅರುಣ ಬಾಗೇವಡಿ, ಸಹದೇವಪ್ಪ, ಮಹಾಂತೇಶ ಮುಧೋಳ, ನಾಗರಾಜ ಮೊರಟಗಿ, ಡಬ್ಲೂಪಿಸಿ ಜ್ಯೋತಿ ಬನವಾಸಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top