Slide
Slide
Slide
previous arrow
next arrow

ಶಿರಸಿಯಲ್ಲಿ ಬೆಳ್ಳಂಬೆಳಿಗ್ಗೆ NIA ದಾಳಿ; SDPI ಮುಖಂಡ ಅಜೀಜ್ ಬಂಧನ

300x250 AD

ಶಿರಸಿ: ರಾಜ್ಯದಲ್ಲಿ ವಿವಿಧೆಡೆ ದಾಳಿ ನಡೆದಂತೆ ಶಿರಸಿ ತಾಲೂಕಿನ ಬನವಾಸಿ ರಸ್ತೆಯಲ್ಲಿನ ಟಿಪ್ಪು ನಗರ ಎಂದು ಕರೆಯಲ್ಪಡುವ ಭಾಗದಲ್ಲಿ ರಾಷ್ಟ್ರೀಯ ತನಿಖಾ ದಳದವರು ಸ್ಥಳೀಯ ಪೊಲೀಸರೊಂದಿಗೆ ದಾಳಿ ನಡೆಸಿ, ಓರ್ವ ಎಸ್ಡಿಪಿಐ ಮುಖಂಡನನ್ನು ಬಂಧಿಸಿದ್ದಾರೆ.

ಎಸ್ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬತಾನನ್ನು ಬಂಧಿಸಲಾಗಿದೆ. ಬೆಳಿಗ್ಗೆ 3.30 ರಿಂದಲೇ ಅಬ್ದುಲ್ ಮನೆಯ ಮೇಲೆ ದಾಳಿ ನಡೆಸಲು ಪೊಲೀಸರ ದಂಡೇ ನೆರೆದಿತ್ತು. ಸುಮಾರು 6 ಗಂಟೆಯ ವೇಳೆಗೆ ಅಬ್ದುಲ್ ಮನೆಗೆ ಪೊಲೀಸರು ಹೊಕ್ಕಿದ್ದು, ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕ ಹಾಗೂ ಒಂದು ಸಿಡಿಯನ್ನು ಜಪ್ತು ಮಾಡಲಾಗಿದೆ.‌
 ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರವಿ ಡಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಹಾಗೂ ಶಿರಸಿ ಉಪವಿಭಾಗದ ಅಧಿಕಾರಿಗಳು ಇದ್ದರು.

300x250 AD

Attachments area

Share This
300x250 AD
300x250 AD
300x250 AD
Back to top