Slide
Slide
Slide
previous arrow
next arrow

ಮನೆ ಕುಸಿತ; ಆರ್ಥಿಕ ಸಹಾಯ ನೀಡಿದ ಪ.ಪಂ ಸದಸ್ಯ

300x250 AD

ಯಲ್ಲಾಪುರ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಪಟ್ಟಣದ ಕಾಳಮ್ಮನಗರ ಮಾರ್ಕೋಜಿ ದೇವಸ್ಥಾನದ ಬಳಿ ಬಡ ವೃದ್ಧ ಮಹಿಳೆಯಯ ಮನೆ ಕುಸಿದಿದ್ದು, ವಲಿಶಾಗಲ್ಲಿ ಪ.ಪಂ ವಾರ್ಡ್ ಸದಸ್ಯ ಕೇಶರ್ ಸಯ್ಯದಲಿ 10 ಸಾವಿರ ರೂಪಾಯಿ ವೈಯಕ್ತಿಕ ಹಣವನ್ನು ತುರ್ತು ದುರಸ್ಥಿಗಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಮಾರ್ಕೋಜಿ ದೇವಸ್ಥಾನ ಪಕ್ಕದ ನಿವಾಸಿ ವೃದ್ಧ ವಿಧವೆ ಮಹಿಳೆ ನಾಗವೇಣಿ ಶೇಟ್, ಸಾದಾ ಮನೆ ಇತ್ತೀಚಿಗೆ ಕುಸಿದು ಬಿದ್ದಿತ್ತು. ಮಹಿಳೆಯೋರ್ವಳೆ ಮನೆಯಲ್ಲಿದ್ದು, ಆಕೆಯ ಮಗ ಶಿರಸಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ಮನೆ ಕುಸಿದಾಗ ಮಹಿಳೆ ಸುರಕ್ಷಿತ ಕೊಣೆಯಲ್ಲಿ ಮಲಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆಕೆಯ ಸ್ಥಿತಿಯನ್ನು ಗಮನಿಸಿದ ಕೇಶರ್ ಸಯ್ಯದಲಿ ಬುಧವಾರ ಮನೆಗೆ ತೆರಳಿ ನಗದು 10 ಸಾವಿರ ರೂಪಾಯಿಯನ್ನು ಮಹಿಳೆಗೆ ಹಸ್ತಾಂತರಿಸಿದ್ದಾರೆ ಹಾಗೂ ಸರ್ಕಾರ ಮತ್ತು ಪಟ್ಟಣ ಪಂಚಾಯತಿಯಿಂದ ಮನೆ ಪುನಃ ನಿರ್ಮಾಣ ಮಾಡಲು ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top