Slide
Slide
Slide
previous arrow
next arrow

ಕನ್ಯಾಡಿಯಲ್ಲಿ ಬ್ರಹ್ಮಾನಂದ ಶ್ರೀಗಳ ಪಾದುಕಾ ಪೂಜೆ

300x250 AD

ಹೊನ್ನಾವರ: ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಗುರುದೇವ ಮಠದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಹಾಗೂ ನೂರಾರು ಭಕ್ತಾದಿಗಳು ಗುರುದೇವ ಮಠಕ್ಕೆ ತೆರಳಿ ಪಾದುಕಾ ಪೂಜೆ ನೆರವೇರಿಸಿ ಗುರುಗಳ ಆಶೀರ್ವಾದ ಪಡೆದುಕೊಂಡರು.
ಸಮಿತಿಯ ಕಾರ್ಯದರ್ಶಿ ಟಿ.ಟಿ.ನಾಯ್ಕ ಹಾಗೂ ದಂಪತಿಗಳು ಗುರುಗಳ ಪಾದುಕಾ ಪೂಜೆ ನೆರವೇರಿಸಿದರು. ಸಮಿತಿಯ ಉಪಾಧ್ಯಕ್ಷ ಕೆ.ಆರ್.ನಾಯ್ಕ, ಸಂಚಾಲಕ ವಾಮನ ಎಸ್.ನಾಯ್ಕ ಹಾಗೂ ಸಮಾಜದ ಹಲವಾರು ಮುಖಂಡರುಗಳು ಸ್ವಾಮೀಜಿಗಳಿಂದ ಸನ್ಮಾನಿತರಾಗಿ ಆಶೀರ್ವಾದ ಪಡೆದುಕೊಂಡರು.
ಮಾರುತಿ ನಾಯ್ಕ ಹಾಗೂ ಸಂಘಟಕರಿಂದ ಭಜನಾ ಕಾರ್ಯಕ್ರಮ ನಡೆಯಿತು. ತಾಲೂಕಿನಿಂದ ಪ್ರಮುಖರಾದ ಎಂ .ಆರ್.ನಾಯ್ಕ, ಮುಕುಂದ ನಾಯ್ಕ, ಯಶವಂತ ನಾಯ್ಕ,ವೆಂಕಟ್ರಮಣ ನಾಯ್ಕ,ರಾಮಪ್ಪ ಜಿ. ನಾಯ್ಕ, ವೈ.ಆರ್.ನಾಯ್ಕ, ಎಲ್.ಆರ್.ನಾಯ್ಕ, ಶೇಖರ ಎಸ್.ನಾಯ್ಕ, ಪಾಂಡು ಎಸ್.ನಾಯ್ಕ, ನಾಗೇಶ ಜಿ.ನಾಯ್ಕ, ರಘುನಾಥ ನಾಯ್ಕ, ಉದಯ ನಾಯ್ಕ, ದಯಾನಂದ ನಾಯ್ಕ,ಸುರೇಶ ಮಂಜು ನಾಯ್ಕ, ಗೋವಿಂದ ಮಾದೇವ ನಾಯ್ಕ, ಮಾರುತಿ ನಾಯ್ಕ, ಆರ್.ಎಚ್.ನಾಯ್ಕ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಪಾದುಕಾ ಪೂಜೆಯಲ್ಲಿ ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದುಕೊಂಡರು.

300x250 AD
Share This
300x250 AD
300x250 AD
300x250 AD
Back to top