Slide
Slide
Slide
previous arrow
next arrow

ಕಸ್ತೂರಿ ರಂಗನ್ ವರದಿ:ಭೌತಿಕ ಸಮೀಕ್ಷೆ ಆಧಾರಿತ ಪ್ರಮಾಣ ಪತ್ರ ಸಲ್ಲಿಸಲು ಆಗ್ರಹ

300x250 AD

ಶಿರಸಿ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಘೋಷಿಸಲ್ಪಟ್ಟ ಪ್ರದೇಶಗಳ ಭೌತಿಕ ಸಮೀಕ್ಷೆ ತಯಾರಿಸಿ  ವೈಜ್ಞಾನಿಕ ಅಂಶಗಳ ಆಕ್ಷೇಪಣೆ ಮತ್ತು ಪ್ರಮಾಣ ಪತ್ರವನ್ನ ಸಲ್ಲಿಸಬೇಕು ಎಂದು ಹಸಿರು ನ್ಯಾಯಕರಣ ಪೀಠಕ್ಕೆ ರಾಜ್ಯ ಸರಕಾರ ಸಲ್ಲಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

 ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಜುಲೈ, 30 ರಂದು ಶಿರಸಿಯಲ್ಲಿ ಸಂಘಟಿಸಿದ ಪ್ರತಿಭಟನಾ ರ‍್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಶಿರಸಿ ತಾಲೂಕಿನ ದೇವನಳ್ಳಿ, ಮಂಜಗುಣಿ ಮುಂತಾದ ಗ್ರಾಮ ಪಂಚಾಯತ ವ್ಯಾಪ್ತಿಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

  ಕೇರಳ ಸರಕಾರ ಭೌತಿಕ ಸಮೀಕ್ಷೆಯ ಆಧಾರದ ಮೇಲೆ ಪ್ರಮಾಣ ಮತ್ತು ಆಕ್ಷೇಪಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಮಾರು 3114 ಚ.ಕೀ.ಮೀ ಪ್ರದೇಶ ಕಡಿತವಾಗಿರುವ ಹಿನ್ನೆಲೆಯಲ್ಲಿ ಸಲ್ಲಿಸಬೇಕೆಂದು ಅವರು ಆಗ್ರಹಿಸಿದರು.

300x250 AD

ಸಂಪುಟ ನಿರ್ಣಯಕ್ಕೆ ಮಾನ್ಯತೆ ಇಲ್ಲ :  ವೈಜ್ಞಾನಿಕ ಹಾಗೂ ಭೌತಿಕ ಸಮೀಕ್ಷೆಯ ವಾಸ್ತವಿಕ ಮತ್ತು ನೈಜತೆಯ ಅಂಕೆ ಸಂಖ್ಯೆ ಸಕಾರಣ ನೀಡದೆ ಕೇವಲ ಸಂಪುಟ ತೀರ್ಮಾನದ ಹಿನ್ನೆಲೆಯಲ್ಲಿಯೇ ಕಸ್ತೂರಿ ರಂಗನ ವರದಿ ತಿರಸ್ಕರಿಸಲಾಗಲೀ ಅಥವಾ  ಕ್ಷೇತ್ರ ಕೈ ಬಿಡಲು ಸಾಧ್ಯವಿಲ್ಲವೆಂದು ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರದ ಸಂಪುಟ ತೀರ್ಮಾನದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

  ಸಭೆಯಲ್ಲಿ ರಾಮಚಂದ್ರ ಮರಾಠಿ, ಕಿರಣ ಮರಾಠಿ, ಸುದರ್ಶನ್, ಸಂತೋಷ ಜೀನ್, ನಾರಾಯಣ ಗೌಡ, ಹರಿಹರ ಹಳ್ಳಿಬೈಲ್, ಲಕ್ಷ್ಮಣ, ಮಾದೇವಿ ಮರಾಠಿ, ನಾರಾಯಣ, ದೀವಾಕರ್, ಪ್ರಮೋದ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top