• Slide
    Slide
    Slide
    previous arrow
    next arrow
  • ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

    300x250 AD

    ಕಾರವಾರ:ನಗರದ ವಾರ್ಡ್ ನಂ2 ರಲ್ಲಿ ಅಲಿಗದ್ದಾದಲ್ಲಿ ನಿರ್ಮಿತವಾಗಲಿರುವ ಟನಲ್ ಮೇಲಿಂದ ರಸ್ತೆ ಬದಿ ದಾಟಲು ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ನಗರಸಭೆ ಸದಸ್ಯೆ ಸ್ನೇಹಲ್ ಹರಿಕಂತ್ರ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಕಾರವಾರ ನಗರಸಭೆಯ ವಾರ್ಡ್ ನಂ.2ರ ಅಲಿಗದ್ದಾದಲ್ಲಿ 40ಕ್ಕೂ ಹೆಚ್ಚು ಮನೆಗಳು ಇವೆ, ಈ ಭಾಗದ ರಹವಾಸಿಗಳು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಗುಡ್ಡೆಹಳ್ಳಿ ದೇವಸ್ಥಾನಕ್ಕೆ ಹೋಗುವ ದಾರಿ ಇದ್ದು, ಗುಡ್ಡೆಹಳ್ಳಿಯಲ್ಲಿ ಅನಾದಿಕಾಲದಿಂದಲೂ ದೇವಸ್ಥಾನವಿದೆ. ದೇವಸ್ಥಾನಕ್ಕೆ ಹೋಗುವ ದಾರಿಗೆ ಟನಲ್ ನಿರ್ಮಾಣವಾಗಿ ಅಡ್ಡಿಯಾಗಿರುವ ಕಾರಣ ಗುಡ್ಡೆಹಳ್ಳಿಗೆ ತೆರಳಲು ರಸ್ತೆ ಇಲ್ಲದಂತಾಗಿದೆ. ಆದ್ದರಿಂದ ದೇವಸ್ಥಾನಕ್ಕೆ ಹೋಗಲು ರಸ್ತೆ ನಿರ್ಮಿಸಿಕೊಡುವಂತೆ ವಿನಂತಿಸಿಕೊಂಡರು.

    300x250 AD

    ಈ ವೇಳೆ ನಗರಸಭೆ ಸದಸ್ಯೆ ಸ್ನೇಹಲ್ ಹರಿಕಂತ್ರ ಅವರ ಪತಿ ಚೇತನ್ ಹರಿಕಂತ್ರ, ಸ್ಥಳೀಯರಾದ ಸರೋಜಾ ಗೌಡ, ಪ್ರೇಮಾ ಗೌಡ, ಬೇಬಿ ಗೌಡ, ಮೀನಾಕ್ಷಿ ಗೌಡ ಮುಂತಾದವರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top