Slide
Slide
Slide
previous arrow
next arrow

ಜು.18ರಂದು ಉದ್ಯಮಶೀಲತಾ ಜಾಗೃತಿ ಶಿಬಿರ

300x250 AD

ಕಾರವಾರ: ಕರ್ನಾಟಕ ಸರ್ಕಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್), ಧಾರವಾಡ, ಸಿಡಾಕ್, ಕಾರವಾರ, ಜಿಲ್ಲಾ ಪಂಚಾಯತ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ), ಕಾರವಾರ ಹಾಗೂ ಕಾರವಾರ ಜನ ಶಿಕ್ಷಣ ಸಂಸ್ಥಾನ, ಇವರ ಸಂಯುಕ್ತ ಆಶ್ರಯದಲ್ಲಿ ಜು.18ರಂದು ಮುಂಜಾನೆ 10.30ಕ್ಕೆ ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ಕಾರವಾರ ತಾಲೂಕ ಪಂಚಾಯತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಉದ್ಯಮಶೀಲರ ಸಾಮರ್ಥ್ಯಗಳು, ಉದ್ಯಮ ಸ್ಥಾಪಿಸುವದಕ್ಕೆ ಲಭ್ಯವಿರುವ ಸರ್ಕಾರದ ಯೋಜನೆಗಳು, ಉದ್ಯಮ ಸ್ಥಾಪಿಸಲು ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಪಾತ್ರ, ಯಶಸ್ವಿ ಉದ್ಯಮಶೀಲರ ಅನುಭವ ಮುಂತಾದ ವಿಷಯಗಳನ್ನು ತಿಳಿಸಲಾಗುವದು.

ಉದ್ಯಮ ಪ್ರಾರಂಭಿಸಲು ಉತ್ಸುಕರಾಗಿರುವ ಕುಶಲಕರ್ಮಿಗಳು, ಯುವಕ/ಯುವತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಕನಿಷ್ಠ ಓದುವದಕ್ಕೆ ಹಾಗೂ ಬರೆಯುವದಕ್ಕೆ ಬರುವವರು ಆಗಿರಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು. ಜು. 18 ರಂದು ಮುಂಜಾನೆ 10.30 ಗಂಟೆಗೆ ನೇರವಾಗಿ ಕಾರವಾರ ತಾಲೂಕ ಪಂಚಾಯತ ಭವನದಲ್ಲಿ ಶಿಬಿರಕ್ಕೆ ಹಾಜರಾಗಬಹುದು.

300x250 AD

ಹೆಚ್ಚಿನ ಮಾಹಿಗಾಗಿ ಕಾರವಾರ ಸಿಡಾಕ್ ಉಪ ನಿರ್ದೇಶಕ ಶಿವಾನಂದ ವೆಂ. ಎಲಿಗಾರ ಮೋ. ಸಂಖ್ಯೆ 9448812974 ಹಾಗೂ ಕಾರವಾರ ಸಿಡಾಕ್ ತರಬೇತುದಾರ ಶಿವರಾಜ ಹೆಳವಿ ಮೋ ಸಂಖ್ಯೆ :8722708795, ಕಚೇರಿ ದೂರವಾಣಿ ಸಂಖ್ಯೆ 08382-282646 ಗೆ ಅಥವಾ cedokuttarkannada@gmail.com ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರವಾರ ಸಿಡಾಕ್ ಉಪನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top