Slide
Slide
Slide
previous arrow
next arrow

ಜೂ.8ಕ್ಕೆ ಯೋಗ ಮಂದಿರದಲ್ಲಿ ‘ಗಾನ ವೈಭವ’

300x250 AD

ಶಿರಸಿ: ಗಾನ ವೈಭವ ಹಾಗೂ ಭಕ್ತಿ ಗಾಯನ ಕಾರ್ಯಕ್ರಮ ನಗರದ ಯೋಗಮಂದಿರದಲ್ಲಿ ಜೂನ್ 8ರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.
ಕಲ್ಗಾರ್ ಒಡ್ಡು ಗಾನ ವೈಭವ ಕಾರ್ಯಕ್ರಮ ಇದಾಗಿದ್ದು ರಾಘವೇಂದ್ರ ಆಚಾರ್ಯ ಜನ್ಸಾಲೆ, ಶಶಾಂಕ ಆಚಾರ್ಯ ಕಿರಿಮಂಜೇಶ್ವರ, ಗಣೇಶ ಗಾಂವಕರ್ ಕನಕನಹಳ್ಳಿ ಗಾನ ವೈಭವದಲ್ಲಿ ಭಾಗವಹಿಸುವರು.
ನಂತರ ಭಕ್ತಿ ಗಾಯನದಲ್ಲಿ ವಿಂದ್ಯಾ ಮಂಗಳೂರು ಭಾಗವಹಿಸಲಿದ್ದು ಗುರುರಾಜ್ ಆಡುಕುಳ ತಬಲಾ ಹಾಗೂ ಅಜಯ ಹೆಗಡೆ ವರ್ಗಾಸರ ಹಾರ್ಮೊನಿಯಂ ಸಾಥ್ ನೀಡುವರು. ಕಲಾಸಕ್ತರು ಪಾಲ್ಗೊಳ್ಳುವಂತೆ ಸಂಘಟಕ ದಿನೇಶ ಭಟ್ಟ ಕಲ್ಗಾರ್ ಒಡ್ಡು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top