Slide
Slide
Slide
previous arrow
next arrow

ಬಿಕಾಂ ಪದವಿ: ಚಿನ್ನ ಬಾಚಿದ ಮೇಧಾ ಭಟ್

300x250 AD

ಹೊನ್ನಾವರ: ತಾಲೂಕಿನ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ 2023-24 ನೇ ಸಾಲಿನ ಬಿ.ಕಾಂ ಪದವಿಯನ್ನು ಅಧ್ಯಯನ ಮಾಡಿರುವ ಕು.ಮೇಧಾ ಬಾಲಚಂದ್ರ ಭಟ್ ಇವಳು ಕರ್ನಾಟಕ ವಿಶ್ವವಿದ್ಯಾಲಯದ ಮಟ್ಟದಲ್ಲಿ 4 ಚಿನ್ನದ ಪದಕ ಹಾಗೂ ಶಿಷ್ಯವೇತನವನ್ನು ಪಡೆದು ಗಮನಾರ್ಹ ಸಾಧನೆಯನ್ನು ಮಾಡಿರುತ್ತಾಳೆ.

ಕವಿವಿಯ ಬಿ.ಕಾಂ ವಿಭಾಗದಲ್ಲಿ ಪ್ರಥಮ ಸ್ಥಾನ, ಗಂಗಾಧರ ಹನಶೆಟ್ಟಿ ಮೆಮೋರಿಯಲ್ ಚಿನ್ನದ ಪದಕ, ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇವರು ನೀಡುವ ಚಿನ್ನದ ಪದಕ ,ಬೆಳಗಾಂ ಜಿಲ್ಲಾ ವಿಭಾಗದ ಕೆ.ಯು.ಗೋಲ್ಡನ್ ಜ್ಯುಬಿಲಿ ಸೆಲೆಬ್ರೆಷನ್ ಕಮಿಟಿ ನೀಡುವ ಚಿನ್ನದ ಪದಕ, ದಿ.ಶ್ರೀ.ಗಣೇಶ್ ಹನುಮಂತರಾವ್ ಕಗಲ್ಕರ್ ಮೇಮೋರಿಯಲ್ ಚಿನ್ನದ ಪದಕ ಇನ್ನು ಕೆ.ಎಚ್ ಕಬ್ಬುರ್ ಕ್ಯಾಶ್ ಪ್ರೈಸ್, ಭಾರತ ರತ್ನ ಎಂ. ವಿಶ್ವೇಶ್ವರಯ್ಯ ಸ್ಟೇಟ್ ಬ್ಯಾಂಕ್ ಅಫ್ ಮೈಸೂರ್ ಕ್ಯಾಶ್ ಪ್ರೈಸ್ ಗಳನ್ನು ಪಡೆದು ಕೀರ್ತಿಯನ್ನು ಹೆಚ್ಚಿಸಿರುತ್ತಾಳೆ.

300x250 AD

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ 74ನೇ ಘಟಿಕೋತ್ಸವದಲ್ಲಿ ಮೇಧಾ ಬಾಲಚಂದ್ರ ಭಟ್ ಇವರನ್ನು ಉನ್ನತ ಶಿಕ್ಷಣ ಸಚಿವರು ಮತ್ತು ಕುಲಸಚಿವರು ಗೌರವಿಸಿದರು. ಇವರ ಈ ಸಾಧನೆಗೆ ಎಂ.ಪಿ.ಇ.ಸೊಸೈಟಿ ಅಧ್ಯಕ್ಷರು , ಸದಸ್ಯರು ಮತ್ತು ಶಿಕ್ಷಕ, ಶಿಕ್ಷಕೇತರ ಸಿಬ್ಬಂಧಿಗಳು ಶುಭವನ್ನು ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top