Slide
Slide
Slide
previous arrow
next arrow

ಚೇತನಾ ಪ್ರಿಂಟಿಂಗ್ ಪ್ರೆಸ್‌‌ಗೆ 3.95ಲಕ್ಷ ರೂ. ಲಾಭ

300x250 AD

ಶಿರಸಿ: ಸಹಕಾರಿ ಕ್ಷೇತ್ರದ ಮೂಲಕ ಜಿಲ್ಲೆಯ ಜನಸಾಮಾನ್ಯರ ಆಶೋತ್ತರಗಳು, ಅಗತ್ಯತೆಗಳನ್ನು ಪೂರೈಸುವ ಕಾರ್ಯವನ್ನು ಸಹಕಾರಿ ಸಂಘ, ಸಂಸ್ಥೆಗಳು ಮಾಡುತ್ತ ಬಂದಿವೆ. ಅದರಂತೆಯೇ ಸದಸ್ಯರೂ ಕೂಡ ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಬೇಕೆಂದು ಹಿರಿಯ ಸಹಕಾರಿ ಜಿ.ಎಮ್ ಹೆಗಡೆ, ಹುಳಗೋಳ ಆಶಿಸಿದರು.

ಶಿರಸಿಯ ಟಿ.ಎಮ್.ಎಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ-ಆಪ್ ಸೊಸೈಟಿಯ 36ನೇ ವಾರ್ಷಿಕ ಸರ್ವಸಾಧಾರಣಾ ಸಭೆಯನ್ನುದ್ಧೇಶಿಸಿ ಮಾತನಾಡಿ, ಸದಸ್ಯರ ಅಗತ್ಯತೆಗಳನ್ನು ಕಾಲಕಾಲಕ್ಕೆ ಪೂರೈಸುವುದರ ಮೂಲಕ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ಸಹಕಾರ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಶಕ್ತಿ ತುಂಬುವ ಕಾರ್ಯ ಎಲ್ಲರಿಂದಾಗಬೇಕು ಎಂದರು.
ಸಹಕಾರಿ ರಂಗದ ಆಶೋತ್ತರಗಳನ್ನು ಹೊಂದಿ 1988ರಲ್ಲಿ ಸ್ಥಾಪನೆಗೊಂಡ ಚೇತನಾ ಸಹಕಾರಿ ಮುದ್ರಣಾಲಯ ಆರಂಭದಲ್ಲಿ ತೀರ ಕಷ್ಟದ ದಿನಗಳನ್ನು ಕಳೆದಿದೆ. ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಹೊಂದಿದ್ದಲ್ಲದೇ, ನಷ್ಟದ ಸುಳಿಯಲ್ಲಿ ಸಂಸ್ಥೆ ಸಿಲುಕಿತ್ತು. ಸ್ವಂತ ಕಟ್ಟಡವಿಲ್ಲದೆ ಮುದ್ರಣ ಯಂತ್ರಗಳನ್ನು ಹೊತ್ತುಕೊಂಡು ಪದೇ ಪದೇ ಸಂಸ್ಥೆಯ ಸ್ಥಳವನ್ನು ಬದಲಾಯಿಸಿದ್ದೇವೆ. ಚೇತನಾ ಸಹಕಾರಿ ಮುದ್ರಣಾಲಯವು ಪ್ರಿಂಟಿಂಗ್ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿಶೇಷವಾದ ಸಂಸ್ಥೆಯೆಂದು ಗುರುತಿಸಿಕೊಂಡಿದೆ ಎಂದರು.

ಸಂಘದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಜಿಲ್ಲೆಯ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು, ಸೌಹಾರ್ದ ಬ್ಯಾಂಕುಗಳು, ತಾಲೂಕಾ ಹುಟ್ಟುವಳಿಗಳ ಮಾರಾಟ ಸಂಘಗಳು, ಬ್ಯಾಂಕ್‌ಗಳು ಈ ಸಂಸ್ಥೆಗೆ ಪೂರಕ ಆಹಾರವಾಗಿದೆ. ಸಂಘ-ಸಂಸ್ಥೆಗಳ, ಜನಸಾಮಾನ್ಯರ ಮುದ್ರಣ ಅಗತ್ಯತೆಗಳನ್ನು ಸರಿಯಾದ ವೇಳೆಗೆ, ಸ್ಪಷ್ಟವಾಗಿ ಒದಗಿಸುತ್ತ ಲಾಭದ ಹಾದಿಯಲ್ಲಿ ಸಂಸ್ಥೆ ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಮುದ್ರಣಾಲಯದಲ್ಲಿ ಕಾಲಕಾಲಕ್ಕೆ ನೂತನ ಯಂತ್ರೋಪಕರಣಗಳನ್ನು ಅಳವಡಿಸುವಲ್ಲಿ ಯೋಜನೆ ರೂಪಿಸಿದ್ದೇವೆ. ಸಂಸ್ಥೆಯ ಏಳ್ಗೆಗೆ ಅಗತ್ಯವಿರುವ ಸಲಹೆ, ಸೂಚನೆಗಳನ್ನು ಸದಸ್ಯರು ನೀಡುವುದರ ಜೊತೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು.

300x250 AD

ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಪ್ರಸಾದ ಹೆಗಡೆ ಕಡಬಾಳ ವರದಿ ವಾಚಿಸಿ, 2023-24 ನೇ ಸಾಲಿನಲ್ಲಿ ಸಂಘವು 3,95,878.40 ರೂ. ನಿವ್ವಳ ಲಾಭಗಳಿಸಿದೆ. ಒಟ್ಟೂ 308 ಶೇರು ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ 2.45 ಲಕ್ಷ ರೂ. ಶೇರು ಬಂಡವಾಳ, ಒಟ್ಟೂ ನಿಧಿಗಳು 144.42 ಲಕ್ಷ ಇದ್ದು, 51.82 ಲಕ್ಷ ರೂ ಗುಂತಾವಣೆಯಿದೆ. ಶೇರು ಸದಸ್ಯರ ಹಾಗೂ ಸಂಘದ ಮೇಲಿನ ಅಭಿಮಾನದಿಂದ ಮುದ್ರಣ ಕಾರ್ಯವನ್ನು ನೀಡುತ್ತಾ ಬಂದಿರುವ ಗ್ರಾಹಕರೆಲ್ಲರ ಸಹಕಾರದಿಂದ ಈ ಬಾರಿ ಒಟ್ಟೂ 1.23 ಕೋಟಿಗೂ ಅಧಿಕ ಮುದ್ರಣ ಕಾರ್ಯವನ್ನು ಮಾಡಿದೆ ಎಂದರು.

ಸಭೆಯಲ್ಲಿ ಹಿರಿಯ ಸಹಕಾರಿ ಜಿ.ಟಿ. ಹೆಗಡೆ, ತಟ್ಟೀಸರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಸುರೇಶ ಹೆಗಡೆ, ಹಕ್ಕೀಮನೆ ವಂದಿಸಿದರು.

ಬಾಕ್ಸ್.
ಅಭಿಮಾನದ ಸಂಮಾನ…
ಸಂಘದಲ್ಲಿ ಕಳೆದ 34 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಭಾಕರ ಹೆಗಡೆ ಕಂಪ್ಲಿ ದಂಪತಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಜೊತೆಯಲ್ಲಿ ಹಿರಿಯ ಸಹಕಾರಿಗಳಾದ ಎಸ್.ಪಿ ಶೆಟ್ಟಿ ಶಿರಸಿ, ಟಿಎಮ್‌ಎಸ್ ಶಿರಸಿಯ ನಿವೃತ್ತ ಮುಖ್ಯ ಕಾರ್ಯನಿರ್ವಾಹಕರಾದ ಎಮ್. ಎ ಹೆಗಡೆ ಕಾನಮುಸ್ಕಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Share This
300x250 AD
300x250 AD
300x250 AD
Back to top