Slide
Slide
Slide
previous arrow
next arrow

ಶಿರಸಿಗೆ ವರ್ಗಾವಣೆಗೊಂಡ ಎಎಸ್ಐ ನಾರಾಯಣ ರಾಥೋಡ

300x250 AD

ದಾಂಡೇಲಿ : ಕಳೆದ ಆರು ವರ್ಷಗಳಿಂದ ದಾಂಡೇಲಿ ನಗರ ಠಾಣೆಯಲ್ಲಿ ಎಎಸ್ಐ ಆಗಿ ದಕ್ಷ, ಪ್ರಾಮಾಣಿಕವಾಗಿ ಅನುಪಮ ಸೇವೆಯನ್ನು ಸಲ್ಲಿಸಿದ ನಾರಾಯಣ ರಾಥೋಡ ಅವರಿಗೆ ಶಿರಸಿ ನಗರ ಠಾಣೆಗೆ ವರ್ಗಾವಣೆಯಾಗಿದೆ.

ಕಳೆದ 27 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾರಾಯಣ ರಾಥೋಡ ಅವರು ಜನಸ್ನೇಹಿ ಅಧಿಕಾರಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಅದರಲ್ಲಿ ವಿಶೇಷವಾಗಿ ನ್ಯಾಯವನ್ನು ಅರಸಿ ಬರುವ ಬಡವರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಮೂಲಕ ಬಡವರ, ಜನಸಾಮಾನ್ಯರ ಪ್ರೀತಿಯ ಅಧಿಕಾರಿಯಾಗಿ ಗಮನ ಸೆಳೆದವರು.

300x250 AD

ನಾರಾಯಣ ರಾಥೋಡ ಅವರ ದಾಂಡೇಲಿಯಲ್ಲಿನ ಆರು ವರ್ಷಗಳ ಸೇವೆಯನ್ನು ದಾಂಡೇಲಿಯ ಸರ್ವ ಜನತೆಯು ಕೊಂಡಾಡುತ್ತಿದೆ. ಸ್ವಚ್ಛ ಕೈ, ಸ್ವಚ್ಛ ಮನಸ್ಸಿನ ನೇರ, ನಿಷ್ಠುರ ನಡೆ-ನುಡಿಯ ನಾರಾಯಣ ರಾಥೋಡ ಅವರು ಆದಷ್ಟು ಶೀಘ್ರ ಪಿಎಸ್ಐ ಆಗಿ ಪದೋನ್ನತಿಗೊಂಡು ಮತ್ತೆ ದಾಂಡೇಲಿಗೆ ಬರುವಂತಾಗಲಿ ಎನ್ನುವುದೇ ಎಲ್ಲರ ಹಾರೈಕೆ.

Share This
300x250 AD
300x250 AD
300x250 AD
Back to top