Slide
Slide
Slide
previous arrow
next arrow

ದಾಂಡೇಲಿಯಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ರಾಯರ ರಥೋತ್ಸವ

300x250 AD

ದಾಂಡೇಲಿ: ನಗರದ ಟೌನ್ ಶಿಪ್ ನಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ.

ಗುರುವಾರ ಬೆಳಿಗ್ಗೆ ಆರಂಭಗೊಂಡ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ರಥೋತ್ಸವವು ಶ್ರೀ ರಾಘವೇಂದ್ರ ಮಠದಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೊನೆಯಲ್ಲಿ ಶ್ರೀ ರಾಘವೇಂದ್ರ ಮಠದಲ್ಲಿ ಗುರುವಾರ ಸಂಪನ್ನಗೊಂಡಿತು.

300x250 AD

ಮಠದ ಪ್ರಧಾನ ಅರ್ಚಕರಾದ ವಾದಿರಾಜ್ ಆಲೂರು ಅವರ ಪೌರೋಹಿತ್ಯದಲ್ಲಿ ನಡೆದ ಪೂಜಾ ಕಾರ್ಯಕ್ರಮ ಹಾಗೂ ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಾಣೇಶ್ ಮುಗಳಿಹಾಳ, ಉಪಾಧ್ಯಕ್ಷರಾದ ರಾಘು ಜೋಶಿ, ಮಠದ ಆಡಳಿತ ಸಮಿತಿಯ ಪ್ರಮುಖರುಗಳಾದ ಡಾ.ಆರ್.ಕೆ. ಕುಲಕರ್ಣಿ, ಗುರುರಾಜ ಪುರೋಹಿತ, ಸಂಜಯ್ ಹುಕ್ಕೇರಿಕರ, ಪ್ರಮೋದ ದೇಸಾಯಿ, ಸುಧಾಕರ ಶೆಟ್ಟಿ, ಸಂಜಯ ರಾಯಚೂರು, ಮುರಳೀಧರ ಅಣ್ಣೇಕರನವರ ಹಾಗೂ ಮಠದ ಆಡಳಿತ ಮಂಡಳಿಯ ಸದಸ್ಯರು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top