Slide
Slide
Slide
previous arrow
next arrow

ಬೀದಿ ದೀಪಕ್ಕೆ ವಿದ್ಯುತ್ ಸಂಪರ್ಕ ನೀಡಲು ಆಗ್ರಹ

300x250 AD

ಶಿರಸಿ: ನಗರದಲ್ಲಿರುವ ಕೋರ್ಟ್ ರಸ್ತೆಯ ಮತ್ತು ಮರಾಠಿಕೊಪ್ಪದ ವಿಶಾಲನಗರದಲ್ಲಿರುವ ಪೌರ ಕಾರ್ಮಿಕರ ಕಾಲೋನಿಗೆ ಹೈ ಮಾಸ್ಟ್ ಬೀದಿ ದೀಪವನ್ನು ಸಮಾಜ ಕಲ್ಯಾಣ ಇಲಾಖೆಯು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಸಫಾಯಿ ಕರ್ಮಚಾರಿ ಕಾಲೋನಿ ಅಭಿವೃದ್ಧಿ ಯೋಜನೆ (2022-23) ಅಡಿಯಲ್ಲಿ ಹೈ ಮಾಸ್ಟ್ ದೀಪ ಅಳವಡಿಸಿ ನಾಲ್ಕು ತಿಂಗಳಾದರೂ ಈವರೆಗೆ ಅದಕ್ಕೆ ವಿದ್ಯುತ ಸಂಪರ್ಕ ನೀಡಿಲ್ಲ ಎಂದು ಸ್ಥಳೀಯ ಸುಭಾಷ್ ಮಂಡೂರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂಬಂಧಿಸಿದವರಿಗೆ ವಿಚಾರಿಸಿದರೆ ಸೂಕ್ತ ಕ್ರಮ ಕೈಗೊಂಡಿಲ್ಲ ಹಾಗೂ ಸದರಿ ಕಾಮಗಾರಿ ಕುರಿತು ಮಾಹಿತಿ ಫಲಕದಲ್ಲಿ ಸದರಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಹಾಗೂ ಕಾಮಗಾರಿಯ ಮೊತ್ತವನ್ನು ನಮೂದಿಸಿಲ್ಲ. ಈ ಕುರಿತು ಸಂಬಂಧಪಟ್ಟವರು ಗಮನಹರಿಸಿ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top