Slide
Slide
Slide
previous arrow
next arrow

ರಾಗಿಹೊಸಳ್ಳಿ ಬಳಿ ಮತ್ತೆ ಭೂಕುಸಿತ; ರಸ್ತೆ ಮೇಲೆ ಮಣ್ಣಿನ ರಾಶಿ

300x250 AD

ಶಿರಸಿ: ತಾಲೂಕಿನ ಕುಮಟಾ ರಸ್ತೆಯ ದೇವಿಮನೆ ಸಮೀಪ ರಾಗಿಹೊಸಳ್ಳಿಯಲ್ಲಿ ಕಳೆದೊಂದು ನಾಲ್ಕೈದು ದಿನದ ಹಿಂದೆ ಉಂಟಾಗಿದ್ದ ಭೂಕುಸಿತ ಹಿನ್ನಲೆಯಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿತ್ತು.

ಗುರುವಾರ ಸಂಜೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದ ತೆರವು ಕಾರ್ಯಾಚರಣೆ ಬೆನ್ನಲ್ಲೇ, ಶುಕ್ರವಾರ ಬೆಳ್ಳಂಬೆಳಿಗ್ಗೆ ಇದೇ ಸ್ಥಳದಲ್ಲಿ ಮತ್ತೆ ಭಾರೀ ಪ್ರಮಾಣದ ಭೂಕುಸಿತವಾಗಿದ್ದು, ಮತ್ತೆ ಇದೀಗ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಇನ್ನೆರಡು ದಿನ ಸಂಚಾರಕ್ಕೆ ಅನುವು ದೊರೆಯುವುದು ಕಷ್ಟಕರವಾಗಿದ್ದು, ಸಾರ್ವಜನಿಕರು ಬದಲಿ ಮಾರ್ಗ ಬಳಸುವುದು ಅನಿವಾರ್ಯವಾಗಿದೆ.

300x250 AD
Share This
300x250 AD
300x250 AD
300x250 AD
Back to top