Slide
Slide
Slide
previous arrow
next arrow

ಭಡ್ತಿಯೊಂದಿಗೆ ವರ್ಗಾವಣೆಗೊಂಡ ಹೆಸ್ಕಾಂ ಶಾಖಾಧಿಕಾರಿ ಪರಶುರಾಮ ಉಪ್ಪಾರ

300x250 AD

ದಾಂಡೇಲಿ : ನಗರದ ಹೆಸ್ಕಾಂ ಉಪ ವಿಭಾಗೀಯ ಕಚೇರಿಯಲ್ಲಿ ದಾಂಡೇಲಿ ನಗರ ಶಾಖೆಯ ಶಾಖಾಧಿಕಾರಿಯಾಗಿ ಕಳೆದ‌‌ ಕೆಲ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದ ಪರಶುರಾಮ ಉಪ್ಪಾರ ಅವರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹುದ್ದೆಗೆ ಬಡ್ತಿಗೊಂಡು, ಹೆಸ್ಕಾಂ ವಿಭಾಗೀಯ ಕಾರ್ಯಾಲಯಕ್ಕೆ ವರ್ಗಾವಣೆಗೊಂಡಿದ್ದಾರೆ.

ದಾಂಡೇಲಿ ನಗರದ ಜನಪ್ರಿಯ ಹೆಸ್ಕಾಂ ಶಾಖಾಧಿಕಾರಿಯಾಗಿ ತಮ್ಮ ಅತ್ಯುತ್ತಮ ಜನಸ್ನೇಹಿ ನಡವಳಿಕೆಯ ಮೂಲಕವೇ ಪರಶುರಾಮ್ ಉಪ್ಪಾರ ಗಮನ ಸೆಳೆದಿದ್ದಾರೆ. ಎಂತಹ ಕ್ಲಿಷ್ಟ ಸಂದರ್ಭದಲ್ಲಿಯೂ ಸಮಸ್ಯೆಗಳನ್ನು ಮೆಟ್ಟಿನಿಂತು ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

300x250 AD
Share This
300x250 AD
300x250 AD
300x250 AD
Back to top