Slide
Slide
Slide
previous arrow
next arrow

ಭಾರತ ಸ್ಕೌಟ್ಸ್,ಗೈಡ್ಸ್‌ ವಾರ್ಷಿಕ ಸಭೆ: ಪುನಶ್ಚೇತನ ಶಿಬಿರ

300x250 AD

ಶಿರಸಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಸರಕಾರಿ ಶಾಲೆಗಳಿಗೆ ಬಣ್ಣದಾನದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್ ನಾಯ್ಕ್ ಅಭಿಪ್ರಾಯಪಟ್ಟರು. ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಸ್ಥಳೀಯ ಸಂಸ್ಥೆ ಶಿರಸಿ ಇದರ ವಾರ್ಷಿಕ ಸಭೆ ಹಾಗೂ ಪುನಶ್ಚೇತನ ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಸ್ಕೌಟ್ಸ್ ಮತ್ತು ಗೈಡ್ಸ್  ಜಿಲ್ಲಾ ಮುಖ್ಯ ಆಯುಕ್ತರಾದ ವಿ.ಹೆಚ್. ಭಟ್ಕಳ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರಾದ ಬಿ.ವಿ.ಗಣೇಶ ಶಿರಸಿ ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಸುರೇಶ್ ಪಟಗಾರ ಆಗಮಿಸಿದ್ದರು. ದಮನಬೈಲ  ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ಗೀತಾ ಪಾವಸ್ಕರ್, ಎ.ಎಸ್.ಓ.ಸಿ. ವೀರೇಶ್ ಮಾದರ ಹಾಗೂ ಕಾರ್ಯದರ್ಶಿ ಎನ್.ಎಸ್. ಭಾಗ್ವತ್ ಉಪಸ್ಥಿತರಿದ್ದರು. ರಾಜ್ಯ ಸಂಸ್ಥೆಯು ನೀಡಿದ ಕಾರ್ಯಕ್ರಮಗಳ ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಶಿರಸಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್.ಎಸ್.ಭಾಗ್ವತ್ ವಾರ್ಷಿಕ ವರದಿಹಾಗೂ ಲೆಕ್ಕಪತ್ರ ಮಂಡಿಸಿದರು. ತಾಲೂಕ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರಾದ ಬಿ.ವಿ.ಗಣೇಶ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಸಂಬಂಧಿಸಿದ ಸವಿವರವಾದ ಮಾಹಿತಿ ನೀಡಿದರು. ಸ್ಕೌಟ್ ಮಾಸ್ಟರ್ ಹೇಮಂತ ಭಂಡಾರಿ  ಪ್ರಥಮ ಚಿಕಿತ್ಸೆ, ಸ್ಕೌಟ್ ಮಾಸ್ಟರ್ ಕಮಲಾಕರ್ ಪಟಗಾರ ಗಂಟುಗಳ ಬಗ್ಗೆ ತರಬೇತಿ ನೀಡಿದರು. ಗೈಡ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ್ ಹಾಗೂ ಗೈಡ್ ಕ್ಯಾಪ್ಟನ್ ಶ್ರೀಮತಿ ಬೀಬಿ ಮರಿಯಮ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರ್ಥನಾ ಗೀತೆಯನ್ನು ಹಾಡಿದರು.  ಸ್ಕೌಟ್ ಮಾಸ್ಟರ್ ಕಿರಣ್ ಫರ್ನಾಂಡಿಸ್ ಸ್ವಾಗತಿಸಿದರು.ಖಜಾಂಚಿ ಬಿ.ಬಿ. ಮಾಲಿ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು. ಜಂಟಿ ಕಾರ್ಯದರ್ಶಿ ಶ್ರೀಮತಿ ಯಮುನಾ ಪೈ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top