Slide
Slide
Slide
previous arrow
next arrow

ಕಾರು ಪಲ್ಟಿ: ಪತ್ರಕರ್ತ ಬಸವರಾಜ್ ಪಾಟೀಲ್‌ಗೆ ಗಾಯ

300x250 AD

ಮುಂಡಗೋಡ: ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಬಸವರಾಜ ಪಾಟೀಲ ಪ್ರಯಾಣಿಸುತ್ತಿದ್ದ ಕಾರು ಶಿಗ್ಗಾವಿ ತಾಲ್ಲೂಕಿನ ಬಸನಕಟ್ಟಿ ಗ್ರಾಮದ ಸನಿಹ ನಿಯಂತ್ರಣ ತಪ್ಪಿ ಶುಕ್ರವಾರ ಸಂಜೆ ರಸ್ತೆ ಪಕ್ಕ ಉರುಳಿಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪತ್ರಕರ್ತ ಬಸವರಾಜ ಪಾಟೀಲ ಅವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಮುಂಡಗೋಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರಾತ್ರಿಯೇ ಮನೆಗೆ ಮರಳಿದ್ದಾರೆ. ಅವರ ಮಗನಿಗೂ ಸ್ವಲ್ಪ ಮಟ್ಟಿಗಿನ ಗಾಯವಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಅಮವಾಸ್ಯೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಕಾರಡಗಿ ಹಾಗೂ ಮಂತ್ರೋಡಿ ಸ್ವಾಮೀಜಿ ಮಠಕ್ಕೆ ಹೋಗಿ ಮರಳಿ ಮುಂಡಗೋಡಕ್ಕೆ ಬರುತ್ತಿರುವಾಗ, ತಾಲೂಕಿನ ಗಡಿಭಾಗದಿಂದ ಏಳೆಂಟು ಕಿಮೀ ದೂರದ ಬಸನಕಟ್ಟಿ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದೆ.

300x250 AD
Share This
300x250 AD
300x250 AD
300x250 AD
Back to top