ಯಲ್ಲಾಪುರ: ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಪಟ್ಟಣದ ಮಲ್ಲಿಕಾ ಹೋಟೆಲ್ ಬಳಿ ನಡೆದಿದೆ.
ಗುಳ್ಳಾಪುರದ ಗಂಗಾಧರ ಗುರು ಬೋವಿವಡ್ಡರ್ (48) ಮೃತ ವ್ಯಕ್ತಿ. ಗುಲ್ಬರ್ಗಾದ ದುತ್ತರಗಾಂನ ಶೈಲೇಂದ್ರ ಸುರೇಶ ಪೌದಾರ ಹಾಗೂ ಬೆಳಗಾವಿಯ ರಾಯಭಾಗದ ಪ್ರತಿಭಾ ರಾಜು ಸೌದತ್ತಿ ಗಾಯಗೊಂಡವರು. ಘಟನೆಯಲ್ಲಿ ಎರಡೂ ಬೈಕ್ ಗಳು ಜಖಂಗೊಂಡಿವೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ಗಳ ನಡುವೆ ಡಿಕ್ಕಿ: ಓರ್ವ ಸಾವು
![](https://euttarakannada.in/wp-content/uploads/2023/12/accident-1-730x422.jpg)