Slide
Slide
Slide
previous arrow
next arrow

ಸಮುದ್ರದ ಅಲೆಗೆ ಸಿಕ್ಕ ಕಾರ್ಮಿಕನ ರಕ್ಷಣೆ

300x250 AD

ಕಾರವಾರ: ಸಮುದ್ರದ ಈಜಾಡಲು ತೆರಳಿದ್ದ ಕಾರ್ಮಿಕನೋರ್ವ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ವೇಳೆ ಲೈಫ್‌ಗಾರ್ಡ್, ವಾಟರ್‌ ಸ್ಫೋರ್ಟ್ ಸಿಬ್ಬಂದಿಗಳು ಆತನನ್ನು ರಕ್ಷಿಸಿದ ಘಟನೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆದಿದೆ.

ಬಬ್ಲು ಶೇನ್(34), ಮುಳುಗುತ್ತಿದ್ದ ಕಾರ್ಮಿಕನಾಗಿದ್ದು, ಈತ ಪಶ್ಚಿಮ ಬಂಗಾಳ ಮೂಲದವನೆಂದು ತಿಳಿದುಬಂದಿದೆ. ಕಾರವಾರದ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ, ಈತ ರವಿವಾರ ರಜಾದಿನ ಹಿನ್ನೆಲೆ ಸಮುದ್ರದಲ್ಲಿ ಈಜಾಡಲು ಕಡಲತೀರಕ್ಕೆ ಬಂದಿದ್ದ. ಸಮುದ್ರಕ್ಕೆ ಇಳಿದು ಕೆಲ ಸಮಯ ಈಜಾಡುತ್ತಲೇ ನಿತ್ರಾಣಗೊಂಡು ಮುಳುಗುತ್ತಿದ್ದ ಈತನನ್ನು ಗಮನಿಸಿದ ಲೈಫ್ ಗಾರ್ಡ್ ಹಾಗೂ ವಾಟರ್ ಸ್ಫೋರ್ಟ್ ಸಿಬ್ಬಂದಿ ತಕ್ಷಣ ಜೆಟ್‌ಸ್ಕೀ ಮೂಲಕ ತೆರಳಿ ಮುಳುಗುತ್ತಿದ್ದ ಕಾರ್ಮಿಕನ ರಕ್ಷಣೆ ಮಾಡಿದ್ದಾರೆಂದು ತಿಳಿದುಬಂದಿದೆ.

300x250 AD
Share This
300x250 AD
300x250 AD
300x250 AD
Back to top