Slide
Slide
Slide
previous arrow
next arrow

ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

300x250 AD

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊನ್ನೆಹದ್ದದ ನರಸಿಂಹ ಹೆಗಡೆ ಹಾಗೂ ಸಂತೋಷ ಹೆಗಡೆ ಅವರ ಅಡಕೆ ತೋಟಕ್ಕೆ ಇತ್ತೀಚೆಗೆ ಆಕಸ್ಮಿಕ ಬೆಂಕಿ ಬಿದ್ದು ಹಾನಿ ಸಂಭವಿಸಿದ ಸ್ಥಳಕ್ಕೆ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಭೇಟಿ ನೀಡಿ, ಸಾಂತ್ವನ ನೀಡಿದರು.

ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಸುಮಾರು ಒಂದು ಎಕರೆಯಷ್ಟು ಅಡಕೆ ತೋಟ ಹಾನಿ ಸಂಭವಿಸಿರುವುದನ್ನು ಪರಿಶೀಲಿಸಿ ಟಿಎಸ್‌ಎಸ್ ಸಂಸ್ಥೆಯಿಂದ ರೈತ ರಕ್ಷಾ ಕವಚ ಯೋಜನೆಯಡಿಯಲ್ಲಿ ಆರ್ಥಿಕ ಸಹಕಾರ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗೋಪಾಲಕೃಷ್ಣ ವೈದ್ಯ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಹೆಗಡೆ ಕುಂಬಾರಕುಳಿ,ಚಂದ್ರಶೇಖರ ನರಸಿಂಹ ಹೆಗಡೆ ಹೊನ್ನೆಹದ್ದ, ಸಂತೋಷ ಎಂ.ಹೆಗಡೆ ಹೊನ್ನೆಹದ್ದ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top