Slide
Slide
Slide
previous arrow
next arrow

ಮಹಾದೇವ ದೇವಸ್ಥಾನದ ವರ್ಧಂತಿ; ನಾಟ್ಯ ಮಂಡಳಿಗೆ ಸುವರ್ಣ ಸಂಭ್ರಮ

300x250 AD

ಕಾರವಾರ: ಬಾಡ ಶ್ರೀಮಹಾದೇವ ದೇವಸ್ಥಾನದ ವರ್ಧಂತಿ ಉತ್ಸವ ಹಾಗೂ ಶ್ರೀಮಹಾದೇವ ನಾಟ್ಯ ಮಂಡಳಿಯ ಸುವರ್ಣಮಹೋತ್ಸವ ಸಮಾರಂಭ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ನಟ, ನಿರ್ದೇಶಕ ಹಾಗೂ ಪರಿಸರವಾದಿ ಸುರೇಶ ಹೆಬ್ಳಿಕರ್ ಕಾರ್ಯಕ್ರಮ ಉದ್ಘಾಟಿಸಿ, ಹಿರಿಯ ಕಲಾವಿದರಿಗೆ ಸನ್ಮಾನಿಸಿದರು. ಶುಭನುಡಿಗಳಿಂದ ಶ್ರೀಮಹಾದೇವ ನಾಟ್ಯ ಮಂಡಳಿ ಹಾಗೂ ಕಲಾವಿದರ ಬಗ್ಗೆ ಕಲಾ ಪೋಷಕರಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಗರಸಭೆಯ ಸದಸ್ಯ ಪಾಂಡುರಂಗ ರೇವಂಡಿಕರ, ಜಗನ್ನಾಥ್ ಜೋಶಿ, ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರಕಾಶ್ ರಾಣೆ ಉಪಸ್ಥಿತರಿದ್ದು ಚಂದಗಾಣಿಸಿದರು. ರಾತ್ರಿ ಶ್ರೀಮಹಾದೇವ ನಾಟ್ಯಮಂಡಳಿಯ ಸದಸ್ಯರಿಂದ ಕೃಷ್ಣಾನಂದ ನಾಯಕ ವಿರಚಿತ ಹಾಸ್ಯಭರಿತ ನಾಟಕ ‘ಧನ ಪಿಶಾಚಿ’ ಆಡಿ ತೋರಿಸಿ ಜನ ಮೆಚ್ಚುಗೆ ಗಳಿಸಿದರು.
ನಾಟ್ಯ ಮಂಡಳಿಯ ಅಧ್ಯಕ್ಷ ಶಿವಾನಂದ ಕದಂ, ಮಹಾದೇವ ದೇವಸ್ಥಾನ ಕಮಿಟಿಯ ಅಧ್ಯಕ್ಷ ಸಂದೀಪ್ ಮಡಿವಾಳ ಹಾಗೂ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

300x250 AD
Share This
300x250 AD
300x250 AD
300x250 AD
Back to top