Slide
Slide
Slide
previous arrow
next arrow

ರಾಜ್ಯ ರಾಜಕೀಯ ಬೆಳವಣಿಗೆ ಶೀಘ್ರದಲ್ಲಿ ಸುಖಾಂತ್ಯ; ಕೋಡಿಮಠದ ಶ್ರೀಗಳು ನುಡಿದರು ಭವಿಷ್ಯ!

ಶಿರಸಿ: ತಾಲೂಕಿನ ಈಚಲು ಬೆಟ್ಟದಲ್ಲಿ ಭೂದೇವಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಶೀಘ್ರದಲ್ಲೇ ಈ ಬೆಳವಣಿಗೆ ಸುಖಾಂತ್ಯ ಕಾಣಲಿದೆ ಎಂದು ಶ್ರೀಗಳು ಹೇಳಿದ್ದಾರೆ.
ರಾಜಕೀಯ ಬೆಳವಣಿಗೆ ಯಾವ ರೀತಿಯ ಸುಖಾಂತ್ಯ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯಕ್ಕೆ ಈಗ ಅಶುಭ ನುಡಿಯುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು
ರಾಜಕೀಯ ಬೆಳವಣಿಗೆಯ ಕುರಿತು ಮಠಾಧೀಶರು ಅಭಿಪ್ರಾಯ ವ್ಯಕ್ತಪಡಿಸುವುದು ಅವರವರ ವಾಕ್ ಸ್ವಾತಂತ್ರ್ಯವಾಗಿದ್ದು, ಈ ಅವಕಾಶವನ್ನು ಸಂವಿಧಾನವೇ ನೀಡಿದೆ ಎಂದು ಸಮರ್ಥಿಸಿಕೊಂಡರು.
ಆಗಸ್ಟ್ ಮೂರನೇ ವಾರದಿಂದ ರೋಗ ರುಜಿನ ಹೆಚ್ಚಾಗಲಿದೆ. ಅದು ಜನವರಿಯವರೆಗೆ ಇರಲಿದೆ. ಆದರೆ ಕೊರೊನಾ ಸಾಯುವಂತಹ ಕಾಯಿಲೆ ಅಲ್ಲ. ಜನರು ಕೇವಲ ಭೀತಿಯಿಂದ ಸಾಯುತ್ತಿದ್ದಾರೆ. ಯಾರೂ ಗಾಬರಿ ಪಡುವ ಅವಶ್ಯಕತೆಯಿಲ್ಲ. ಆಶ್ವೀಜ ಮಾಸದಿಂದ ಸಂಕ್ರಾಂತಿಯ ಒಳಗೆ ಬಹುದೊಡ್ಡ ಅವಘಡ ಆಗಲಿದೆ. ಮುಂದೆ ಹೆಚ್ಚು ಮಳೆಯಾಗಲಿದ್ದು, ಜಲಪ್ರಳಯ ಉಂಟಾಗಲಿದೆ ಎಂದು ಇದೇ ವೇಳೆ ಮತ್ತೊಂದು ಭವಿಷ್ಯ ನುಡಿದರು.

Share This
Back to top