Slide
Slide
Slide
previous arrow
next arrow

ಟಿಎಮ್ಎಸ್‌ಗೆ 5.5ಕೋಟಿ ರೂ. ನಿವ್ವಳ ಲಾಭ: ಆರ್.ಎಮ್.ಹೆಗಡೆ ಮಾಹಿತಿ

300x250 AD

ಸಿದ್ದಾಪುರ: ಇಲ್ಲಿನ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘವು 5,55,59,327.450 ರೂ ನಿವ್ವಳ ಲಾಭವನ್ನು ಗಳಿಸಿದ್ದು, ಇಂದು ಜೂ..28ಕ್ಕೆ ಟಿಎಂಎಸ್ ಸಭಾಂಗಣದಲ್ಲಿ ಸರ್ವಸದಸ್ಯರ ಸಭೆಯು ನಡೆಯಲಿದೆ.

ಕೇವಲ ಅಡಿಕೆ ಮಾರಾಟಕ್ಕೆ ಸೀಮಿತವಾಗದೆ ಸದಸ್ಯರಿಗೆ ಅವಶ್ಯಕವಿರುವ ಕಿರಾಣಿ ಸಾಮಾನು, ಕಟ್ಟಡ ಸಾಮಾನು, ಔಷಧ ಸೇರಿದಂತೆ ಉತ್ತಮ ಗುಣಮಟ್ಟದ ಕೈಗೆಟುಕುವ ದರದಲ್ಲಿ ನೀಡುತ್ತಾ ಬಂದಿದೆ.

ಈ ಕುರಿತು ಸಂಘದ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಮಾಹಿತಿ ನೀಡಿದ್ದು, ಸಂಘವು 78 ಸಾರ್ಥಕ ವಸಂತಗಳನ್ನು ಪೂರೈಸಿ 79ನೇ ವರ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾರ್ಚ 31ಕ್ಕೆ ಮುಗಿದ ಆರ್ಥಿಕ ವರ್ಷ 2024-25 ಸಾಲಿನಲ್ಲಿ 5,55,59,327.450 ರೂ. ಲಾಭ ಗಳಿಸಿದೆ.

ಕಾನಸೂರು ಹಾಗೂ ಶಿರಸಿಯಲ್ಲಿ ಶಾಖೆಗಳನ್ನು ಹೊಂದಿರುವ ಸಂಘ 2024-25 ನೆಯ ಸಾಲಿನಲ್ಲಿ ದಾಖಲೆಯ 63.127 ಕ್ವಿ.ಅಡಕೆ, 489 ಕ್ವಿ. ಮೆಣಸು, 1014ವಕ್ವಿಂಟಲ್ ಹಸಿ ಅಡಿಕೆ ವಿಕ್ರಿಮಾಡಿದ್ದು, ಸಂಘದ ವಹಿವಾಟು ರೂ.234.01 ಕೋಟಿ ಆಗಿದ್ದು, ಹಾಗೂ ದುಡಿಯುವ ಬಂಡವಾಳ ರೂ 237.20ಕೋಟಿಗೂ ಅಧಿಕವಾಗಿದೆ.

300x250 AD

ಕೃಷಿ ವಿಭಾಗದಲ್ಲಿ ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ ಹಾಗೂ ಪ್ಲಾಸ್ಟಿಕ್ ಸಾಮಗ್ರಿ ಸೇರಿ ರೂ.7.78 ಕೋಟಿ ರೂ. ವಿಕ್ರಿ ವ್ಯವಹಾರ ಮಾಡಲಾಗಿದೆ. ಸಂಘದ ಲಾಭದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಂಚಿಕೆ ಮಾಡಲು ಆಡಳಿತ ಮಂಡಳಿಯು ನಿರ್ಣಯಿಸಿದೆ ಎಂದು ಹೇಳಿದರು.

ಕೇಂದ್ರ ಕಛೇರಿ ಹಾಗೂ ಕಾನಸೂರ ಶಾಖೆಯಲ್ಲಿ ವಿಶಾಲವಾದ ವ್ಯಾಪಾರಾಂಗಣವನ್ನು ನಿರ್ಮಿಸಲಾಗಿದೆ. ಅಕ್ಕಿಗಿರಣಿಯ ಪಕ್ಕದಲ್ಲಿ ಗೋದಾಮು ನಿರ್ಮಾಣ ಹಾಗೂ ಕಾನಸೂರ ಶಾಖೆಯಲ್ಲಿ ಗೋದಾಮು ನಿರ್ಮಾಣ ಮಾಡಿ ಉಪಯೋಗಿಸಲಾಗುತ್ತಿದೆ. ಕಳೆದ ಬಾರಿ ಮಾರಾಟ ಮಳಿಗೆ ಶಿರಸಿ ಹಾಗೂ ಕಾನಸೂರ ಶಾಖೆಯಲ್ಲಿ ದಾಖಲೆ ಪ್ರಮಾಣದ ಅಡಿಕೆ ವಿಕ್ರಿಯಾಗಿದ್ದು, ವಿಶೇಷವಾಗಿ ಕಾನಸೂರ ಶಾಖೆಯಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಒದಗಿಸಲು ಆ ಭಾಗದ ಸದಸ್ಯರ ಬೇಡಿಕೆಯಿದ್ದು, ಮುಂದಿನ ದಿನಗಳಲ್ಲಿ ಸದಸ್ಯರ ಆಧ್ಯತೆಯ ಮೇರೆಗೆ ಹೊಸ ಯೋಜನೆ ಹಾಗೂ ವ್ಯವಹಾರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗುವುದು. ಸದಸ್ಯರ ಅಡಿಕೆ, ಕಾಳುಮೆಣಸು ಶಿಲ್ಕಿಗೆ ಯಾವುದೇ ಶುಲ್ಕ ವಿಧಿಸಲಾಗುತ್ತಿಲ್ಲ ಹಾಗೂ ಗೋದಾಮಿಗೆ ವಿಮೆ ರಕ್ಷಣೆಯನ್ನು ನೀಡಲಾಗಿದೆ.ಕಳೆದ ಆರ್ಥಿಕ ವರ್ಷದಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳಿಗೆ ರೂ.34.40ಕೋಟಿ, ಹಾಗೂ ವಯಕ್ತಿಕ ಸದಸ್ಯರಿಗೆರೂ. 85.78ಕೋಟಿಯಷ್ಟು ಆಸ್ಸಾಮಿ ಮುಂಗಡ ಸಾಲವನ್ನು ಮಂಜೂರಿಮಾಡಲಾಗಿದೆ. ಸಕ್ರಿಯವಾಗಿ ವ್ಯವಹರಿಸುವ ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ 10,000ರೂ. ಧನಸಹಾಯ ನೀಡಲಾಗುತ್ತಿದೆ.ವರದಿ ವರ್ಷದಲ್ಲಿ 50 ಮೃತ ಸದಸ್ಯರ ಕುಟುಂಬಕ್ಕೆ ತಲಾರೂ. 10,000 ರಂತೆ ಅಂತೂ 5,00,000 ಯೋಜನೆಯಿಂದ ನೀಡಲಾಗಿದೆ.ಸಂಘದಲ್ಲಿ ವ್ಯವಹಾರ ಕೈಕೊಂಡ ಹಾಗೂ ಅವರಕುಟುಂಬದ ಸದಸ್ಯರ ಅನಾರೋಗ್ಯದ ಸಂದರ್ಭದಲ್ಲಿ, ಸದಸ್ಯರ ಹಿತದೃಷ್ಠಿಯಿಂದ, ಆಸ್ಪತ್ರೆಯಚಿಕಿತ್ಸಾ ವೆಚ್ಚವನ್ನು ಭರಿಸಿಕೊಡುವ ಸದುದ್ದೇಶದಿಂದ, ಸಂಘದ ಕ್ಷೇಮನಿಧಿ ಯೋಜನೆಯು ಪುನರಾರಂಭವಾಗಿದೆ ಎಂದು ಆ‌ರ್.ಎಂ.ಹೆಗಡೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಮ್.ಜಿ ನಾಯ್ಕ ಹಾದ್ರಿಮನೆ, ನಿರ್ದೇಶಕರಾದ ಕೆ.ಕೆ.ನಾಯ್ಕ ಸುಂಕತ್ತಿ, ಜಿ.ಎಮ್. ಭಟ್ ‌ಕಾಜಿನಮನೆ, ಇಂದಿರಾ ಎಸ್. ಭಟ್‌ ಗುಡ್ಡೆಕೊಪ್ಪ, ಜಿ.ಎನ್.ಹಸ್ಲರ್‌ಕುಡಗುಂದ, ಎಮ್‌.ಎನ್. ಹೆಗಡೆ ತಲೆಕೆರೆ, ಪಿ.ಕೆ. ನಾಯ್ಕ ಮುಗದೂರ, ಸುಧೀರ ಬಿ.ಗೌಡರ್‌ ಬಾಳೆಕುಳಿ, ಸುಬ್ರಮಣ್ಯ ಜಿ. ಭಟ್ ಚಟ್ನಳ್ಳಿ, ಕೆ.ಆರ್.ವಿನಾಯಕ ಕೋಲಸಿರ್ಸಿ, ಪ್ರಧಾನ ವ್ಯವಸ್ಥಾಪಕ ಸತೀಶ್‌ ಎಸ್. ಹೆಗಡೆ ಹೆಗ್ಗಾರಕೈ, ಉಪವ್ಯವಸ್ಥಾಪಕ ಪ್ರಸನ್ನಕುಮಾರ್‌ ಭಟ್‌ ಕೆರೆಹೊಂಡ ಹಾಜರಿದ್ದರು.

Share This
300x250 AD
300x250 AD
300x250 AD
Back to top