ಶಿರಸಿ: ಅನುದಾನಿತ ಶಾಲೆಗಳ ಹಲವಾರು ಸಮಸ್ಯೆಗಳನ್ನ ಒಳಗೊಂಡು ಮುಖ್ಯವಾಗಿ 60% ಫಲಿತಾಂಶ ಬರದ ಶಾಲೆಗಳಲ್ಲಿ ಶಿಕ್ಷಕರಿಗೆ ಮಾರಕವಾಗುವಂತಹ ಆದೇಶವನ್ನು ಮಾಡಿರುವುದದು ಶಿಕ್ಷಕರು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿರುವಾಗ ಮಾನಸಿಕ ಕಿರಿಕಿರಿಯನ್ನು ಕೊಡುವಂತಾಗಿದೆ. ಇದನ್ನು ವಿರೋಧಿಸಿ ತಾಲೂಕ ಮಾಧ್ಯಮಿಕ ಮಾಧ್ಯಮಿಕ ನೌಕರರ ಸಂಘ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕ, ಮುಖ್ಯೋಧ್ಯಾಪಕರ ಸಂಘ ಶೈಕ್ಷಣಿಕ ಜಿಲ್ಲಾ ಘಟಕ, ಹಾಗೂ ಎಲ್ಲ ತಾಲೂಕುಗಳ ಘಟಕಗಳ ವತಿಯಿಂದ ಶಿರಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮಿಕ ನೌಕರ ಸಂಘದ ಅಧ್ಯಕ್ಷ ನಾರಾಯಣ ದೈಮನೆ, ಪ್ರಧಾನ ಕಾರ್ಯದರ್ಶಿ ದಿನೇಶ್ ನೇತ್ರಕರ, ಮುಖ್ಯಾಧ್ಯಾಪಕ ಸಂಘದ ಅಧ್ಯಕ್ಷ ಮೂಡಣ್ಣನವರ್ ಹಾಗೂ ತಾಲೂಕಿನ ಎಲ್ಲಾ ಅಧ್ಯಕ್ಷ ಕಾರ್ಯದರ್ಶಿಗಳು ಮತ್ತು ಮಾಧ್ಯಮಿಕ ನೌಕರರ ಸಂಘದ ಕೇಂದ್ರ ಸಮಿತಿಯ ಸದಸ್ಯರಾದ ಎಂ ರಾಜಶೇಖರ್ ಉಪಸ್ಥಿತರಿದ್ದರು. ಉಪ ವಿಭಾಗ ಅಧಿಕಾರಿಗಳ ಪರವಾಗಿ ಮನವಿ ಸ್ವೀಕರಿಸಿದ ಕಚೇರಿಯ ಮುಖ್ಯಸ್ಥರಾದ ಬೆಳ್ಳಿಮನೆಯವರು ಮನವಿ ಸ್ವೀಕರಿಸಿದರು. ಸಂದರ್ಭದಲ್ಲಿ ಜಿಲ್ಲೆಯಾದ್ಯಂತದ ನೂರಾರು ನೌಕರ ಸಂಘದ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕರಿಗೆ ಮಾರಕವಾಗುವಂತಹ ಆದೇಶ ವಿರೋಧಿಸಿ ಮನವಿ ಸಲ್ಲಿಕೆ
