ಕುಮಟಾ: -ಅಂಚೆ ಇಲಾಖೆಯು ಪ್ರಸಕ್ತ ಉಪಯೋಗಿಸುತ್ತಿರುವ ಸಾಫ್ಟ್ವೇರ್ ಅನ್ನು ಬದಲಾವಣೆ ಮಾಡುತ್ತಿದ್ದು ಹೊಸ ಸಾಫ್ಟ್ವೇರ್ ಅಳವಡಿಕೆಯ ಪ್ರಕ್ರಿಯೆಯು ಕುಮಟಾ ಪ್ರಧಾನ ಅಂಚೆ ಕಚೇರಿಯ ಅಡಿಯಲ್ಲಿ ಬರುವ ಉಪ ಅಂಚೆ ಕಚೇರಿ ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ಜೂ.23 ಮತ್ತು 25 ರವರೆಗೆ ನಡೆಯಲಿದ್ದು, ಆ ದಿನಗಳಲ್ಲಿ ಯಾವುದೇ ರೀತಿಯ ಅಂಚೆ ವ್ಯವಹಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ.
ಕುಮಟಾ ತಾಲೂಕಿನ ಬಂಕಿಕೊಡ್ಲ, ಚಂದಾವರ, ಗೋಕರ್ಣ, ಗುಡೇಅಂಗಡಿ, ಹೆಗಡೆ ಹೆರವಟ್ಟ, ಹಿರೇಗುತ್ತಿ, ಮಾದನಗೇರಿ, ಮಿರ್ಜಾನ, ಕುಮಟಾ ಕೆನರಾ ಕಾಲೇಜು ರಸ್ತೆ ಕುಮಟಾ, ಕುಮಟಾ ಕಚೇರಿ, ತಡತೋಕ ಮತ್ತು ಹೊನ್ನಾವರ ತಾಲೂಕಿನ ಗೇರಸೋಪ್ಪ, ಜ್ಯೋತಿನಗರ, ಹಡಿನಬಾಳ, ಹಳದೀಪುರ, ಹೊನ್ನಾವರ, ಹೊಸಾಡ, ಕರ್ಕಿ, ಕಾಸರಕೋಡು, ಮಂಕಿ, ಮೆಲಿನ್ ಇಡಗುಂಜಿ, ಪ್ರಭಾತನಗರ ಹಾಗೂ ಭಟ್ಕಳ ತಾಲೂಕಿನ ಭಟ್ಕಳ ಬಜಾರ್, ಭಟ್ಕಳ, ಕಾಯ್ಕಿಣಿ, ಮುರ್ಡೇಶ್ವರ, ಶಿರಾಲಿ ಬಜಾರ್, ಶಿರಾಲಿ ಅಂಚೆ ಕಚೇರಿ ಮತ್ತು ಇವುಗಳ ಅಡಿ ಬರುವ ಶಾಖಾ ಅಂಚೆ ಕಚೇರಿಗಳಲ್ಲಿ ಮೂರು ದಿನಗಳ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿದ್ದು ಅಂಚೆ ಗ್ರಾಹಕರು ಸಹಕರಿಸುವಂತೆ ಕಾರವಾರ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಟಾದಲ್ಲಿ ಜೂ.23, 25 ರಂದು ಅಂಚೆ ವ್ಯವಹಾರ ಸ್ಥಗಿತ
