ದಾಂಡೇಲಿ : ನಗರದ 11 ಕೆವಿ ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕೆಲಸ ಇರುವ ಹಿನ್ನಲೆಯಲ್ಲಿ ನಗರದ ಹಲವೆಡೆ ಮತ್ತು ಗ್ರಾಮೀಣ ಭಾಗದ ಕೆಲವೆಡೆ ಜೂನ್ 3 ರಿಂದ ಜೂನ್ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ ನಾಯಕ ಅವರು ಸೊಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 3 ರಂದು ದಾಂಡೇಲಿ ನಗರದ ಇ.ಡಬ್ಲೂ.ಎಸ್, ಬಸವೇಶ್ವರನಗರ, ಸುಭಾಷ್ ನಗರ, ಆಜಾದ್ ನಗರ, 14ನೇ ಬ್ಲಾಕ್, ಟೌನಶಿಪ್, ಜೆ.ಎನ್.ರಸ್ತೆ, ಬಾಂಬೆಚಾಳ, ಸಂಡೇ ಮಾರ್ಕೆಟ್, ಲೆನಿನ್ ರಸ್ತೆ, ಲಿಂಕ್ ರಸ್ತೆ, ಅಂಬೇವಾಡಿ, ಅಂಬೇವಾಡಿ ಕೈಗಾರಿಕಾ ಪ್ರದೇಶದಲ್ಲಿ, ಜೂನ್.04 ರಂದು ಗಾವಟಾಣ, ಗಣೇಶನಗರ, ವನಶ್ರೀನಗರ, ಸಾಯಿ ನಗರ, ಗಾಂಧಿನಗರ, ಮಾರುತಿ ನಗರ, ವಿಜಯ ನಗರ, ಟೌನಶಿಪ್, ಡಿ.ಎಫ್.ಎ ಟೌನಶಿಪ್ ಮತ್ತು ಅಂಬೇವಾಡಿಯಲ್ಲಿ, ಜೂನ್.05 ರಂದು ನವಗ್ರಾಮ, ಗಾಂಧಿನಗರ, ಪಟೇಲ್ ನಗರ, ಹಳೆ ದಾಂಡೇಲಿ, ಬೈಲುಪಾರ್, ಕೋಗಿಲಬನ, ಕುಳಗಿ ರಸ್ತೆ, ಜೆ.ಎನ್.ರಸ್ತೆ, ಸಾಮಿಲ್, ಫಾರೆಸ್ಟ್ ಡಿಪೋ, ಐಪಿಎಮ್ ಮತ್ತು ಜನತಾ ಕಾಲೋನಿ ಹಾಗೂ ಜೂನ್.06 ರಂದು ಹಳಿಯಾಳ ರಸ್ತೆ, ಅಂಬೇವಾಡಿ, ನಿರ್ಮಲ ನಗರ, ಎಸ್.ಆರ್.ಟಿ, ಟಿ.ಆರ್.ಟಿ, ಹಸನ್ಮಾಳ, ಬರ್ಚಿ ರಸ್ತೆ ಮತ್ತು ಕೆ.ಸಿ.ವೃತ್ತದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಜೂನ್.03 ರಿಂದ ಜೂನ್ 6 ರವರೆಗೆ ಆಯಾಯ ಪ್ರದೇಶಗಳಲ್ಲಿ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಎಂದಿನಂತೆ ಸಾರ್ವಜನಿಕರು ಸಹಕರಿಸುವಂತೆ ದೀಪಕ ನಾಯಕ ಅವರು ವಿನಂತಿಸಿದ್ದಾರೆ.