ಶಿರಸಿ: ಪ್ರಪಂಚದ ಅತಿ ಕಠಿಣ ಪರೀಕ್ಷೆ ಗಳಲ್ಲಿ ಒಂದಾದ ಜೆಇಇ ಅಡ್ವಾನ್ಸ್ನಲ್ಲಿ ಈ ವರ್ಷ 1.87 ಲಕ್ಷ ವಿದ್ಯಾರ್ಥಿಗಳು ಕುಳಿತಿದ್ದು ಅದರಲ್ಲಿ ಇಲ್ಲಿನ ಚಂದನ ಕಾಲೇಜಿನ ವಿದ್ಯಾರ್ಥಿ ವೇಣುಗೋಪಾಲ ಎ.ಬಿ. ರಾಷ್ಟ್ರಕ್ಕೆ 336ನೇ ರ್ಯಾಂಕ್,.ಚಿನ್ಮಯ ಹೆಗಡೆ ರಾಷ್ಟ್ರಕ್ಕೆ 5822ನೇ ರ್ಯಾಂಕ್ ಪಡೆದು ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಚಂದನ ಕಾಲೇಜಿನ ಸಂಸ್ಥಾಪಕ ಎಲ್.ಎಂ.ಹೆಗಡೆ ಗೋಳಿಕೊಪ್ಪ,ಆಡಳಿತ ಮಂಡಳಿ ಉಳಿದ ಸದಸ್ಯರು, ಪ್ರಾಚಾರ್ಯ ಆರ್.ಎಂ. ಭಟ್ಟ, ಉಪನ್ಯಾಸಕ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.