Slide
Slide
Slide
previous arrow
next arrow

ಅಂಗನವಾಡಿ ವರಾಂಡ ನಿರ್ಮಿಸಿ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ

300x250 AD

ಶಿರಸಿ: ತಾಲೂಕಿನ ಹಲಗದ್ದೆ ಪಂಚಾಯತ್ ವ್ಯಾಪ್ತಿಯ ಮಾಡನಕೇರಿ ಗ್ರಾ.ಪಂ. ಸದಸ್ಯರಾದ ಸದಾನಂದ ನಾಯ್ಕ ರವರು ತಮ್ಮ ಗ್ರಾಮದ ಅಂಗನವಾಡಿಯ ಮುಂಭಾಗದ ವರಾಂಡವನ್ನು ಸುಮಾರು 15 ಸಾವಿರ ರೂ.ಗಳ ಸ್ವಂತ ಖರ್ಚಿನಲ್ಲಿ ನಿರ್ಮಿಸುವ ಮೂಲಕ ಅ.2 ರ ತಮ್ಮ ಹುಟ್ಟುಹಬ್ಬದ ಕೊಡುಗೆಯನ್ನು ನೀಡಿದರು. ಗ್ರಾ.ಪಂ. ಸದಸ್ಯರಾದ ಸದಾನಂದ ನಾಯ್ಕ ಮಾಡನಕೇರಿ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಸೇವೆಗೆ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ನಾಯ್ಕ ಹಾಗೂ ಸಹಾಯಕಿ ರೂಪಾ ನಾಯ್ಕ ಪಾಲಕ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

 ಗ್ರಾ. ಪಂ. ಸದಸ್ಯರಾದ ಸದಾನಂದ ನಾಯ್ಕರವರು ಕಳೆದ ವರ್ಷವೂ ತನ್ನ ಜನ್ಮ ದಿನದ ನೆನಪಿಗಾಗಿ ಮಾಡನಕೇರಿ ಶಾಲೆಯ ಅಡುಗೆ ಕೋಣೆ ವರಾಂಡ ನಿರ್ಮಿಸಿಕೊಟ್ಟಿರುವುದನ್ನೂ ಸಾರ್ವಜನಿಕರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top