Slide
Slide
Slide
previous arrow
next arrow

ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

300x250 AD

ದಾಂಡೇಲಿ : ನಗರದ ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಎರಡ್ಮೂರು ಕಡೆ ಕಚ್ಚಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಮಾರುತಿ ನಗರದ ನಿವಾಸಿ ವಿದ್ಯಾದರ ಕಾಂಬಳೆಯವರ ಪುತ್ರ ಸುಪ್ರೀತ್ ವಿದ್ಯಾಧರ ಕಾಂಬಳೆ ಎಂಬಾತನೆ ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕನಾಗಿದ್ದಾನೆ. ಈತ ಮನೆಯಿಂದ ಅಂಗಡಿಗೆ ಹೋಗಿ ಬರುತ್ತಿರುವಾಗ ಏಕ ಏಕಿ ಬೀದಿನಾಯಿಗಳು ದಾಳಿ ಮಾಡಿವೆ. ದಾಳಿಯ ಸಂದರ್ಭದಲ್ಲಿ ಸುಪ್ರೀತ್ ಈತನ ಕಾಲಿಗೆ ಎರಡ್ಮೂರು ಕಡೆ ಕಚ್ಚಿವೆ. ತಕ್ಷಣವೇ ಸ್ಥಳೀಯರು ಬೀದಿನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.

300x250 AD

ಗಾಯಗೊಂಡ ಬಾಲಕ ಸುಪ್ರೀತ್ ಈತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನು ನೀಡಲಾಗಿದೆ.

Share This
300x250 AD
300x250 AD
300x250 AD
Back to top