Slide
Slide
Slide
previous arrow
next arrow

ಬಲೆಯೊಳಗೆ ಸಿಲುಕಿ ಮೀನುಗಾರ ಸಾವು

300x250 AD

ಕುಮಟಾ: ಬೆಟ್ಟುಳ್ಳಿ ಗಜನಿ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ದಾವುದ್ ಅಲಿ ಫಾರಿಯಾ (68) ಎಂಬಾತರು ಮೀನಿನ ಬಲೆಯೊಳಗೆ ಸಿಲುಕಿ ಸಾವನಪ್ಪಿದ್ದಾರೆ.

ಗಜನಿ ಪ್ರದೇಶದಲ್ಲಿ ಗೇಟ್ ಹಾಕುವುದು ಹಾಗೂ ಮೀನುಗಾರಿಕೆ ನಡೆಸಲು ದಾವುದ್ ಅಲಿ ಫಾರಿಯಾ ಟೆಂಡರ್ ಪಡೆದಿದ್ದರು. ಅದರಂತೆ ಸೆ.1ರ ರಾತ್ರಿ 9.30ಕ್ಕೆ ಮೀನುಗಾರಿಕೆ ನಡೆಸಿ ಜಂತ್ರಾಡಿಯ ಗೇಟ್ ಅಳವಡಿಸುವಾಗ ಆಯತಪ್ಪಿ ಅವರು ಬಲೆಯೊಳಗೆ ಬಿದ್ದರು. ಅಸ್ವಸ್ಥಗೊಂಡಿದ್ದ ದಾವುದ್ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತು. ಆದರೆ, ದಿವಿಗಿ ಬಳಿ ಬರುವಾಗಲೇ ಅವರು ಕೊನೆ ಉಸಿರೆಳೆದರು. ದಾವುದ್ ಅಲಿ ಫಾರಿಯಾ ಬರ್ಗಿ ಗ್ರಾ ಪಂ ಸದಸ್ಯರಾಗಿದ್ದರು. ಬೆಟ್ಕುಳಿ ವಾರ್ಡಿನಿಂದ ನಿರಂತರವಾಗಿ ಮೂರು ಬಾರಿ ಗೆದ್ದು ಬಂದಿದ್ದ ಅವರು ಕಳೆದ ಅವಧಿಯಲ್ಲಿ ಗ್ರಾ ಪಂ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅವರು ಸಕ್ರಿಯವಾಗಿದ್ದರು.

300x250 AD

Share This
300x250 AD
300x250 AD
300x250 AD
Back to top