Slide
Slide
Slide
previous arrow
next arrow

ದೇವಸ್ಥಾನದ ಮುಂದೆ ಸಾರಾಯಿ ಮಾರಾಟ: ಪೋಲಿಸರ ದಾಳಿ

300x250 AD

ಹೊನ್ನಾವರ: ಹಳದಿಪುರದ ಸಾಲಕೇರಿ ಗಣಪತಿ ದೇವಸ್ಥಾನದ ಬಳಿ ಗೂಡಂಗಡಿ ನಡೆಸುವ ವಾಸು ದೇವು ಗೌಡ (58) ಎಂಬಾತ ಅಲ್ಲಿಯೇ ಸರಾಯಿ ಮಾರಾಟ ನಡೆಸುತ್ತಿದ್ದು, ಪಿಸೈ ಮಹಾಂತೇಶ ನಾಯ್ಕ ಇದಕ್ಕೆ ತಡೆ ಒಡ್ಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿಯೇ ಈತ ಸರಾಯಿ ಮಾರುತ್ತಿದ್ದು, ವಿವಿಧ ವಾಹನ ಸವಾರರು ಖಾಯಂ ಗಿರಾಕಿಯಾಗಿದ್ದರು. ಮದ್ಯ ಸೇವಿಸಿ ವಾಹನ ಓಡಿಸುವವರಿಂದ ಅಪಘಾತದ ಪ್ರಮಾಣ ಅಧಿಕವಾಗುವ ಸಾಧ್ಯತೆಗಳಿದ್ದವು. ದೇವಾಲಯಕ್ಕೆ ಆಗಮಿಸುವವರಿಗೆ ಸಹ ಅಕ್ರಮ ಸರಾಯಿ ಮಾರಾಟ ಸಮಸ್ಯೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆ.8ರಂದು ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಒಂದಷ್ಟು ಸರಾಯಿ ಕೊಟ್ಟೆ ಹಾಗೂ ಬಾಟಲಿಗಳು ಸಿಕ್ಕಿವೆ. ಈ ಅಕ್ರಮ ಸರಾಯಿಯನ್ನು ಮಾರಾಟ ಮಾಡುತ್ತಿದ್ದ ಹಿನ್ನಲೆ ವಾಸು ಗೌಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top