Slide
Slide
Slide
previous arrow
next arrow

ಬಂಗಾರವನ್ನು ನೀಡುವುದಾಗಿ ವಂಚಿಸಿದ್ದ ಆರೋಪಿಗಳ ಬಂಧನ

300x250 AD

ಶಿರಸಿ: ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ಆರೋಪಿತರನ್ನು ಬಂಧಿಸಲು ಶಿರಸಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಎಸ್‌ಪಿ ಎಂ. ನಾರಾಯಣ ಮಾತನಾಡಿ, ಆ.4ರಂದು ಮಳಲಗಾಂವ ಬಳಿ ದರೋಡೆ ನಡೆದಿತ್ತು. ಬಂಗಾರ ನೀಡುವುದಾಗಿ ವಂಚಿಸಿ 9.11 ಲಕ್ಷ ರೂ ಎಗರಿಸಿದ್ದಾರೆ ಎಂಬುದಾಗಿ ಕೇರಳದ ಮಲಂಪುರದ ಸಚಿನ್‌ ಶಿವಾಜಿ ಗಾಯಕವಾಡ ಎಂಟು ಜನರ ವಿರುದ್ಧ ಬನವಾಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರನ್ನು ದಾಖಲಿಸಿಕೊಂಡ ಪೋಲಿಸರು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿ ಅವರಿಂದ 7.63 ಲಕ್ಷ ರೂ. ಹಾಗೂ 3 ಮೋಟರ್‌ ಸೈಕಲ್‌ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top