Slide
Slide
Slide
previous arrow
next arrow

ಮರ ಬೀಳುವ ಮುನ್ಸೂಚನೆ: ಅಗತ್ಯ ಕ್ರಮಕ್ಕೆ ಆಗ್ರಹ

300x250 AD

ಸಿದ್ದಾಪುರ: ಪಟ್ಟಣ ವ್ಯಾಪ್ತಿಯ ಕೊಂಡ್ಲಿಯಿಂದ ಕೊಪ್ಪಕ್ಕೆ ಸಂಪರ್ಕ ನೀಡುವ ರಸ್ತೆಯಲ್ಲಿನ ಮಾರಿಕಾಂಬಾ ಜಾತ್ರಾ ಗದ್ದುಗೆ ಸಮೀಪದಲ್ಲಿ ಬೃಹತ್ ಮರವೊಂದು ಬೀಳುವ ಮುನ್ಸೂಚನೆ ಇದ್ದು ಅಪಾಯದ ಲಕ್ಷಣಗಳು ಕಂಡುಬರುತ್ತಿದೆ. ಕೂಡಲೇ ಮರವನ್ನ ತೆರವುಗೊಳಿಸಿ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಇಲ್ಲೇ ಸಮೀಪದಲ್ಲಿ ಬಾಲ ಮಂದಿರ, ಪ್ರಾಥಮಿಕ ಶಾಲೆ, ಟ್ರಾನ್ಸ್ಫಾರ್ಮರ್ ಹಾಗೂ ಜನವಸತಿ ಮನೆಗಳಿದ್ದು ಮರ ಉರುಳಿ ಬಿದ್ದರೆ ಪ್ರಾಣಾಪಾಯವಾಗುವಂತಹ ಲಕ್ಷಣಗಳು ಕೂಡ ಇವೆ, ಈಗಾಗಲೇ ಈ  ಕುರಿತಂತೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದೇವೆ ಆದರೂ ಕೂಡ ಯಾವುದೇ ಕ್ರಮವಾಗಲಿಲ್ಲ, ಒಂದು ವೇಳೆ ಬೀಸುತ್ತಿರುವ ಗಾಳಿಯಿಂದ ಮರ ಬಿದ್ದು ಅನಾಹುತವಾದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಹಾಗಾಗಿ ಕೂಡಲೇ ಮರ ತೆರವುಗೊಳಿಸಿ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top